ಮಾನವೀಯತೆ ಇರುವ ಯಾರೂ ಈ ದುಷ್ಕೃತ್ಯವೆಸಗಿದವರನ್ನು ಪ್ರೋತ್ಸಾಹಿಸಬಾರದು: ಎಪಿ ಅಬೂಬಕರ್ ಮುಸ್ಲಿಯಾರ್

Update: 2018-04-14 19:42 GMT

ಹೊಸದಿಲ್ಲಿ, ಎ. 15: ಕಥುವಾದ 8 ವರ್ಷದ ಬಾಲಕಿ ಆಸಿಫಾಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದ್ದು, ಇದು ಅತ್ಯಂತ ಅಮಾನವೀಯ ಕೃತ್ಯ ಹಾಗು ಖಂಡನಾರ್ಹವಾಗಿದೆ ಎಂದು ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ತಿಳಿಸಿದ್ದಾರೆ.

ಈ ಘಟನೆಯ ಬೆನ್ನಿಗೆ ದುಷ್ಕರ್ಮಿಗಳನ್ನು ರಕ್ಷಿಸಲು ಸರಕಾರ ಮತ್ತು ಪೊಲೀಸ್ ಇಲಾಖೆ ಪ್ರಯತ್ನಪಟ್ಟವು. ದುರದೃಷ್ಟವಶಾತ್ ಈ ಘಟನೆ 3 ತಿಂಗಳ ನಂತರವಷ್ಟೆ ಬೆಳಕಿಗೆ ಬಂದಿದೆ. ಮಾನವೀಯತೆ ಇರುವ ಯಾರೂ ಈ ದುಷ್ಕೃತ್ಯವೆಸಗಿದವರನ್ನು ಪ್ರೋತ್ಸಾಹಿಸಬಾರದು. ಆದುದರಿಂದ ಕಾಶ್ಮೀರ ಸರಕಾರ ಮತ್ತು ಭಾರತ ಸರಕಾರದೊಂದಿಗೆ ನಮ್ಮ ಮನವಿ, ಈ ದುಷ್ಕೃತ್ಯವೆಸಗಿದವರನ್ನು ಯಾವುದೇ ಪ್ರಭಾವಕ್ಕೊಳಗಾಗದೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News