ಕಥುವಾ ಪ್ರಕರಣ ಖಂಡಿಸಿ ಎ.21ರಂದು ಜುಬೈಲ್‌ನಲ್ಲಿ ಮಾನವ ಸರಪಳಿ

Update: 2018-04-20 04:33 GMT

ಸೌದಿ ಅರಬಿಯ, ಎ.20: ಜಮ್ಮುವಿನ ಕಥುವಾದಲ್ಲಿ ಇತ್ತೀಚೆಗೆ ನಡೆದ ಎಂಟು ವರ್ಷದ ಬಾಲಕಿಯ ಅತ್ಯಾಚಾರ-ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಸೌದಿ ಅರಬಿಯದಲ್ಲಿರುವ ಅನಿವಾಸಿ ಭಾರತೀಯರು ‘ಜಸ್ಟೀಸ್ ಫಾರ್ ಆಸಿಫಾ’ ಹೆಸರಿನಲ್ಲಿ ಎ.21ರಂದು ಜುಬೈಲ್‌ನಲ್ಲಿ ಮಾನವ ಸರಪಳಿ ಹಾಗೂ ಸಾರ್ವಜನಿಕ ಸಭೆ ಆಯೋಜಿಸಿದ್ದಾರೆ.

ಎ.21ರಂದು ಸಂಜೆ 7:30ಕ್ಕೆ ಜುಬೈಲ್‌ನ ಅಲ್ ಫಲಾಹ್ ಗ್ರೌಂಡಿನಲ್ಲಿ ನಡೆಯುವ ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News