ಉತ್ತರಪ್ರದೇಶ: ದೇವರ ಮೂರ್ತಿ ಅಪವಿತ್ರ: ನಾಲ್ವರ ಬಂಧನ

Update: 2018-04-23 15:21 GMT

ಬಲ್ಲಿಯಾ, ಎ. 23: ಹಿಂದೂ ಧರ್ಮದ ಮೂರ್ತಿಗಳನ್ನು ಅಪವಿತ್ರಗೊಳಿಸಿದ ಹಾಗೂ ದೇವರ ಚಿತ್ರಗಳಿಗೆ ಬೆಂಕಿ ಹಚ್ಚಿದ ಘಟನೆ ಉತ್ತರಪ್ರದೇಶದ ಬಲ್ಲಿಯಾದ ಗ್ರಾಮವೊಂದರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಆದ ಬಳಿಕ ಶನಿವಾರ ಸಂಜೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದಲಿತ್ ಟೋಲಾದ ಹರಿಜನ ಬಸ್ತಿಯಲ್ಲಿರುವ ಕೆಲವು ಮನೆಗಳಿಂದ ದೇವರ ಮೂರ್ತಿ ಹಾಗೂ ಚಿತ್ರಗಳನ್ನು ಹೊರಗೆ ತಂದು ಘೋಷಣೆ ಕೂಗುತ್ತಾ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸ್ ಅಧೀಕ್ಷಕ ವಿಜಯ್ ಪಾಲ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News