ಅಮಿತ್ ಶಾ ನಡೆ ಬೇಸರ ತಂದಿದೆ: ಮಾತೆ ಮಹಾದೇವಿ

Update: 2018-04-29 14:07 GMT

ಬೆಂಗಳೂರು, ಎ.29: ಬಸವಣ್ಣನ ಐಕ್ಯ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡದಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದರು.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ಬಸವಣ್ಣ ಅವರ ಐಕ್ಯ ಸ್ಥಳಕ್ಕೆ ಭೇಟಿ ನೀಡದೇ ಬಂದಿರುವುದು ಲಿಂಗಾಯತರ ಮನಸ್ಸಿಗೆ ನೋವಾಗಿದೆ. ಶನಿವಾರ ಕೂಡಲಸಂಗಮಕ್ಕೆ ತೆರಳಿದ್ದ ಅವರು, ಬಸವಣ್ಣನ ಐಕ್ಯ ಸ್ಥಳಕ್ಕೆ ಹೋಗಿ ದರ್ಶನ ಮಾಡಿ ಬರಬಹುದಿತ್ತು. ಕೇವಲ ದೂರದಲ್ಲಿ ನಿಂತು ಕೈಮುಗಿದು ತೆರಳಿದ್ದಾರೆ ಎಂದು ಆರೋಪಿಸಿದರು.

ಅಮಿತ್ ಶಾ ನಡೆದುಕೊಂಡ ರೀತಿ ಲಿಂಗಾಯತರು, ಬಸವಣ್ಣಗೆ ಮಾಡಿದ ಅವಮಾನವಾಗಿದೆ. ಈ ಹಿಂದೆ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿಯೂ ಇದೇ ಮಾದರಿಯ ಧೋರಣೆ ತೋರಿಸಿದ್ದರು. ಈಗ ಮತ್ತೆ ಅಮಿತ್ ಶಾ ಇಂತಹ ವರ್ತನೆ ತೋರಿದ್ದಾರೆ. ನಿರಂತರವಾಗಿ ಅವರ ನಡವಳಿಕೆ ಬೇಸರ ತರಿಸಿದೆ ಎಂದು ಮಾತೆ ಮಹಾದೇವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News