ಕೊಲ್ಲಿ ಚೌಕಟ್ಟಿನೊಳಗೆ ಮಾತ್ರ ಕತರ್ ಬಿಕ್ಕಟ್ಟಿಗೆ ಪರಿಹಾರ: ಯುಇಎ ವಿದೇಶ ಸಚಿವ

Update: 2018-05-02 16:55 GMT

ಲಂಡನ್, ಮೇ 2: ಕತರ್ ತನ್ನ ನೆರೆಯ ದೇಶಗಳೊಂದಿಗೆ ಹೊಂದಿರುವ ಸಮಸ್ಯೆಗಳನ್ನು ಕೊಲ್ಲಿ ದೇಶಗಳ ಚೌಕಟ್ಟಿನೊಳಗೆ ಮಾತ್ರ ಪರಿಹರಿಸಬಹುದಾಗಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನ ಸಹಾಯಕ ವಿದೇಶ ಸಚಿವ ಅನ್ವರ್ ಗರ್ಗಾಶ್ ಹೇಳಿದ್ದಾರೆ.

ಕತರ್ ವಿಷಯಗಳಿಂದ ನುಣುಚಿಕೊಳ್ಳುವುದನ್ನು ನಿಲ್ಲಿಸಬೇಕು ಹಾಗೂ ಅದರ ನೆರೆ ದೇಶಗಳು ವಿಧಿಸಿರುವ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಕತರ್ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂಬುದಾಗಿ ಆರೋಪಿಸಿ ಕಳೆದ ವರ್ಷದ ಜೂನ್‌ನಲ್ಲಿ ಕೊಲ್ಲಿ ಅರಬ್ ದೇಶಗಳಾದ ಸೌದಿ ಅರೇಬಿಯ, ಯುಎಇ, ಬಹರೈನ್ ಮತ್ತು ಈಜಿಪ್ಟ್‌ಗಳು ಆ ದೇಶದ ವಿರುದ್ಧ ರಾಜತಾಂತ್ರಿಕ ಹಾಗೂ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News