ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ರಚನೆ ಬಗ್ಗೆ ಕುಮಾರಸ್ವಾಮಿ ಹೇಳಿದ್ದೇನು?

Update: 2018-05-15 12:49 GMT

ಬೆಂಗಳೂರು, ಮೇ 15: ಜೆಡಿಎಸ್ ಗೆ ಬೆಂಬಲ ಸೂಚಿಸುವ ಬಗ್ಗೆ ಎಚ್.ಡಿ.ದೇವೇಗೌಡರಿಗೆ ಈಗಾಗಲೇ ತಿಳಿಸಿದ್ದೇವೆ. ಈ ಬಗ್ಗೆ ಕುಮಾರಸ್ವಾಮಿಯವರನ್ನೂ ಭೇಟಿಯಾಗಿ ಪತ್ರ ಕೊಟ್ಟಿದ್ದೇವೆ.  ಈ ಬಗ್ಗೆ ಜೆಡಿಎಸ್ ನವರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿಎಸ್ ಗೆ ಬೆಂಬಲ ನೀಡಲು ನಾವು ಈಗಾಗಲೇ ನಿರ್ಧರಿದ್ದೇವೆ. ನಮ್ಮ ತೀರ್ಮಾನವನ್ನು ರಾಜ್ಯಪಾಲರಿಗೆ ಪತ್ರದ ಮೂಲಕ ನೀಡಿದ್ದೇವೆ. ಸರಕಾರ ಸ್ಥಾಪಿಸಲು ಜೆಡಿಎಸ್ ಗೆ ನಾವು ನೆರವಾಗಲಿದ್ದೇವೆ. 2008ರಂತೆ ಈ ಬಾರಿ ಬಿಜೆಪಿಯವರು ಸಫಲರಾಗುವುದಿಲ್ಲ ಎಂದವರು ಹೇಳಿದರು.

ಈ ಸಂದರ್ಭ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಜೊತೆ ಸೇರಿ ಹೊಸ ಸರಕಾರ ಸ್ಥಾಪಿಸುವ ಬಗ್ಗೆ ರಾಜ್ಯಪಾಲರ ಅನುಮತಿ ಕೋರಿ ಮನವಿ ಸಲ್ಲಿಸಿದ್ದೇವೆ. ನಮ್ಮ ಜೊತೆ ಇಬ್ಬರು ಪಕ್ಷೇತರ ಶಾಸಕರೂ ಇದ್ದಾರೆ. ಚುನಾವಣಾ ಆಯೋಗದಿಂದ ವರದಿ ಪಡೆದು ಸಂಖ್ಯಾಬಲ ಗಮನಿಸಿದ ಬಳಿಕ ಅವರು ನಿರ್ಧಾರ ತಿಳಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News