ಬೆಂಗಳೂರು: ಜೂ.8 ರಂದು ಎಂಎಂವೈಸಿ ವತಿಯಿಂದ ಇಫ್ತಾರ್ ಸೌಹಾರ್ದ ಕೂಟ
Update: 2018-06-07 14:31 GMT
ಬೆಂಗಳೂರು, ಜೂ.7: ಮಂಗಳೂರು ಮುಸ್ಲಿಮ್ ಯೂತ್ ಕೌನ್ಸಿಲ್(ಎಂಎಂವೈಸಿ) ವತಿಯಿಂದ ಜೂ.8ರಂದು ಸಂಜೆ 4 ಗಂಟೆಗೆ ನಗರದ ಕಬ್ಬನ್ಪೇಟೆ ಮುಖ್ಯರಸ್ತೆ ಯಲ್ಲಿರುವ ಹಮೀದ್ ಶಾ ಕಾಂಪ್ಲೆಕ್ಸ್ನಲ್ಲಿ ಇಫ್ತಾರ್ ಸೌಹಾರ್ದ ಕೂಟವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಹಾಶೀಮ್ ಜಿಫ್ರಿ ತಂಙಳ್ ದುಆ ಮಾಡಲಿದ್ದು, ಶಾಫಿ ಸಅದಿ, ಅಬೂಬಕರ್ ಸಿದ್ದೀಖ್ ಹುದೈವಿ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಬಿ.ಎಂ.ಉಮರ್ ಹಾಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ನಿವೃತ್ತ ಡಿಸಿಪಿ ಜಿ.ಎ.ಬಾವಾ, ಜಯದೇವ ಆಸ್ಪತ್ರೆ ನಿರ್ದೇಶಕರ ಕಾರ್ಯದರ್ಶಿ ಸಾದಿಕ್ ಪಾಷ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.