ಸಿದ್ದರಾಮಯ್ಯ ವಿರುದ್ಧ ಎಚ್.ಎಂ.ರೇವಣ್ಣ ಆಕ್ರೋಶ: ಬಿಜೆಪಿಯತ್ತ ಒಲವು?

Update: 2018-06-07 15:53 GMT

ಬೆಂಗಳೂರು, ಜೂ.7: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಿನಿಂದಲೂ ನನ್ನನ್ನು ಬೆಳೆಯಲು ಬಿಡಲಿಲ್ಲ, ತುಳಿಯತ್ತಲೆ ಬಂದರು. ಕುರುಬ ಸಮಾಜಕ್ಕೆ ಅವರಿಂದ ಮೊದಲಿನಿಂದಲೂ ಅನ್ಯಾಯವಾಗುತ್ತಿದೆ ಎಂದು ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿದ್ದು ನಿಜ. ಕುರುಬ ಸಮಾಜಕ್ಕೆ ಒಳ್ಳೆಯ ಅವಕಾಶ ಸಿಕ್ಕಿದರೆ, ನಾನು ಖಂಡಿತವಾಗಿಯೂ ಬಿಜೆಪಿ ಹೋಗುತ್ತೇನೆ. ಈ ಬಗ್ಗೆ ನಮ್ಮ ಸಮಾಜದ ಮುಖಂಡರ ಜೊತೆ ಚರ್ಚಿಸಿ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ಶಾಸಕ ಎಂಟಿಬಿ ನಾಗರಾಜ್ ಯಾಕೋ ಬೇಸರದಲ್ಲಿ ನನ್ನ ವಿರುದ್ಧ ಮಾತನಾಡಿದ್ದಾರೆ. ನನಗೆ ಸಚಿವ ಸ್ಥಾನ ಸಿಕ್ಕಿ, ಅವರಿಗೆ ಸಿಗದೆ ಇದ್ದಿದ್ದರೆ ಅವರ ಆರೋಪಕ್ಕೆ ಅರ್ಥ ಇರುತ್ತಿತ್ತು. ನನಗೇ ಸಚಿವ ಸ್ಥಾನ ಸಿಕ್ಕಿಲ್ಲ, ಇನ್ನು ನಾನು ಹೇಗೆ ಅವರಿಗೆ ತಪ್ಪಿಸಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News