ಮೋದಿ ಹತ್ಯೆ ಸಂಚಿನ ಹಿಂದೆ ಕನ್ನಡಿಗರೂ ಇದ್ದಾರೆ: ಜಗ್ಗೇಶ್ ಟ್ವೀಟ್

Update: 2018-06-09 14:45 GMT

ಬೆಂಗಳೂರು, ಜೂ.9: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪದ ಮೇಲೆ ಶುಕ್ರವಾರ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಆದರೆ ಈ ಸಂಚಿನಲ್ಲಿ ಕರ್ನಾಟಕ ರಾಜ್ಯದವರೂ ಇದ್ದಾರೆ ಎಂಬ ಅನುಮಾನವನ್ನು ಬಿಜೆಪಿ ಮುಖಂಡ ಮತ್ತು ಚಿತ್ರನಟ ಜಗ್ಗೇಶ್ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ರೀತಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡಲು ಮಾವೋವಾದಿಗಳು ಸಂಚು ರೂಪಿಸಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಮಾವೋವಾದಿ ಮುಖಂಡ ಕಿಶನ್ ಎಂಬುವವರನ್ನು ಬಂಧಿಸಲಾಗಿದೆ.

ಆದರೆ, ಪ್ರಧಾನಿ ಮೋದಿ ಹತ್ಯೆ ಸಂಚಿನ ಹಿಂದೆ ನಮ್ಮ ರಾಜ್ಯದವರೂ ಇರುವ ಶಂಕೆಯನ್ನು ಬಿಜೆಪಿ ಮುಖಂಡ ಜಗ್ಗೇಶ್ ವ್ಯಕ್ತಪಡಿಸಿದ್ದು, ಈ ಬಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಕೆಲವೇ ದಿನ, ಬೆತ್ತಲಾಗುತ್ತಾರೆ ಕಿರಾತಕರು, ಅದರಲ್ಲಿ ನಮ್ಮ ರಾಜ್ಯದವರು ಕೆಲವರು ಇರಬಹುದು, ಅನುಮಾನವಿಲ್ಲಾ’ ಎಂದು ಬರೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News