ಐಲ್ಯಾಂಡ್ ಎಕ್ಸ್‌ಪ್ರೆಸ್ ದುರಂತ

Update: 2018-07-07 18:45 GMT

1497: ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮಾ ಲಿಸ್ಬನ್‌ನಿಂದ ತನ್ನ ಪ್ರಪ್ರಥಮ ಪ್ರಯಾಣವನ್ನು ಆರಂಭಿಸಿದ. ಬಳಿಕ ಇದೇ ಯಾನದಲ್ಲಿ ಆತ ಕೇರಳದ ಕಲ್ಲಿಕೋಟೆ ತಲುಪಿದ. ವಾಸ್ಕೋಡಗಾಮನು ಜಲಮಾರ್ಗವಾಗಿ ಭಾರತವನ್ನು ತಲುಪಿದ ಪ್ರಥಮ ಯುರೋಪಿಯನ್ ಎಂಬ ದಾಖಲೆಗೆ ಪಾತ್ರನಾಗಿದ್ದಾನೆ.

1918: ಭಾರತೀಯ ಶಾಸಕಾಂಗ ಸಭೆಗಳಲ್ಲಿ ಸುಧಾರಣೆ ತರುವ ಉದ್ದೇಶದಿಂದ ತಯಾರಾದ ಮೊಂಟೆಗ್ಯೂ-ಚೆಮ್ಸ್‌ಫರ್ಡ್ ವರದಿಯನ್ನು ಈ ದಿನ ಪ್ರಕಟಿಸಲಾಯಿತು.

1954: ವಿಶ್ವದ ಅತ್ಯಂತ ಉದ್ದದ ಅಣೆಕಟ್ಟುಗಳಲ್ಲಿ ಒಂದಾದ ಬಾಕ್ರಾನಂಗಲ್ ಅಣೆಕಟ್ಟನ್ನು ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಈ ದಿನ ಲೋಕಾರ್ಪಣೆಗೊಳಿಸಿದರು.

1988: ಬೆಂಗಳೂರಿನಿಂದ ತಿರುವನಂತಪುರಂಗೆ ಪ್ರಯಾಣ ಬೆಳೆಸಿದ್ದ ಐಲ್ಯಾಂಡ್ ಎಕ್ಸ್‌ಪ್ರೆಸ್ ರೈಲು ಮಧ್ಯಾಹ್ನ 1:15ರ ಸಮಯದಲ್ಲಿ ಕೇರಳದ ಕೊಲ್ಲಂನ ಪೆರುಮಣ್ ಸೇತುವೆಯ ಮೇಲೆ ಹಳಿ ತಪ್ಪಿ, ಅಷ್ಟಮುಡಿ ಸರೋವರಕ್ಕೆ ಬಿದ್ದಿತು. ಈ ವೇಳೆ 105 ಮಂದಿ ಸಾವನ್ನಪ್ಪಿದರು. ಸುಮಾರು 200ಕ್ಕೂ ಹೆಚ್ಚು ಜನರು ಗಾಯಗೊಂಡರು. 1990ರಲ್ಲಿ ಮುಮ್ಮುಟ್ಟಿ ಅಭಿಯನಯದ ‘ಐಯರ್ ಗ್ರೇಟ್’ ಈ ದುರಂತದ ಕಥೆಯನ್ನು ತೆರೆ ಮೇಲೆ ತಂದಿತು.

1996: ಭಾರತದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ರಾಷ್ಟ್ರದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಅವರಿಗೆ ರಾಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಸಂದಿತು.

2007: ಸುಮಾರು 42 ವರ್ಷಗಳ ದೀರ್ಘಾವಧಿಯ ನಂತರ ಭಾರತ ಮತ್ತು ಬಾಂಗ್ಲಾದ ನಡುವಣ ರೈಲು ಸೇವೆ ಪುನರಾರಂಭಗೊಂಡಿತು. ಭಾರತ ಮತ್ತು ಪಾಕಿಸ್ತಾನ ಯುದ್ಧದ ಕಾರಣ ಈ ರೈಲು ಸಂಚಾರಕ್ಕೆ ತಡೆ ಬಿದ್ದಿತ್ತು.

1972: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ನಿವೃತ್ತ ಕ್ರಿಕೆಟಿಗ ಸೌರವ್ ಗಂಗೂಲಿ ಅವರ ಜನ್ಮದಿನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಈ ದಿನ
ಈ ದಿನ