ಪರಿಷತ್‌ನಲ್ಲಿ ಸಚಿವರು ಗೈರು: ಸಭಾಪತಿ ಹೊರಟ್ಟಿ ಅಸಮಾಧಾನ

Update: 2018-07-11 13:39 GMT

ಬೆಂಗಳೂರು, ಜು. 11: ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರು ಸದನಕ್ಕೆ ಬಾರದಿರುವ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿಯವರು ಗರಂ ಆದ ಘಟನೆ ನಡೆಯಿತು.

ಸಚಿವರು ಸದನದ ಕಲಾಪಗಳಲ್ಲಿ ಕಡ್ಡಾಯವಾಗಿ ಹಾಜರಿರಲೇಬೇಕು. ಹೀಗೆ ಬಂದು ಹಾಗೇ ಹೋಗುವುದಕ್ಕೆ ಇದೇನು ಬೀಗರ ಮನೆಯಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಸಚಿವರು ವಿಧಾನಸಭೆಯಲ್ಲೂ ಇಲ್ಲ, ವಿಧಾನ ಪರಿಷತ್ತಿನಲ್ಲೂ ಇಲ್ಲ. ಅಲ್ಲೂ, ಇಲ್ಲೂ ಇಲ್ಲ ಅಂದರೆ ಏನು ಅರ್ಥ ಎಂದು ಬಸವರಾಜ ಹೊರಟ್ಟಿಯವರು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು. ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ. ಪ್ರತಿದಿನದ ಕಲಾಪದಲ್ಲಿ ಇರಬೇಕಾದ ಮಂತ್ರಿಗಳು ಹಾಗೂ ಅಧಿಕಾರಗಳ ಹೆಸರು ಹೇಳುತ್ತೇನೆ. ಹಾಗಿದ್ದೂ ಸದನದಲ್ಲಿ ಹಾಜರಿರಲ್ಲ ಅಂದರೆ ಹೇಗೆ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News