ಜಡೆಯಪ್ಪ
Update: 2018-08-01 12:07 GMT
ಹನೂರು,ಅ.01: ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯೊರ್ವರು ಬುಧವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಮಿಳುನಾಡು ಕೊಳತ್ತೂರು ಗ್ರಾಮದ ಜಡೆಯಪ್ಪ (65) ಮೃತ ವ್ಯಕ್ತಿಯಾಗಿದ್ದು, ತನ್ನ ಸಂಗಡಿಗರೊಂದಿಗೆ ಕರ್ನಾಟಕಕ್ಕೆ ಬಂದು ಹಲವು ದಿನಗಳಿಂದ ಹನೂರು ಪಟ್ಟಣ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಹೇಳಿಕೊಂಡು ಜೀವನ ಸಾಗಿಸುತ್ತಿದ್ದರು.
ಎಂದಿನಂತೆ ಕಾಯಕ ಮುಗಿಸಿ ದೊಮ್ಮನಗದ್ದೆ ಗ್ರಾಮದ ಸರ್ಕಾರಿ ಶಾಲೆ ಜಗಲಿ ಮೇಲೆ ರಾತ್ರಿ ಮಲಗಿದ್ದಾಗ ಎದೆ ನೋವು ಕಾಣಿಸಿಕೊಂಡು ನರಳಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಹನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸುವಷ್ಟರಲ್ಲಿ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ನಂತರ ಶವವನ್ನು ಕೊಳತ್ತೂರಿಗೆ ಕೊಂಡೊಯ್ಯಲಾಯಿತು.