ಬಿಜೆಪಿಯಿಂದ ಕಾಂಗ್ರೆಸ್‌ನ 80 ಶಾಸಕರಿಗೆ ಆಮಿಷ: ದಿನೇಶ್ ಗುಂಡೂರಾವ್ ಆರೋಪ

Update: 2018-08-07 13:27 GMT

ಬೆಂಗಳೂರು, ಆ.7: ದೇವರು, ಧರ್ಮವೆಂದು ಆರಾಧಿಸುವ ಬಿಜೆಪಿ ನಾಯಕರು ಅನೈತಿಕವಾಗಿ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಸದಾ ಹೊಂಚು ಹಾಕುತ್ತಿದ್ದು, ಕಾಂಗ್ರೆಸ್‌ನ 80 ಶಾಸಕರನ್ನು ಹಣ, ಅಧಿಕಾರದ ಆಮಿಷಕ್ಕೆ ಬೀಳಿಸಲು ಪ್ರಯತ್ನಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಬಾರಿ ಅಧಿಕಾರದ ರುಚಿ ನೋಡಿರುವ ಬಿಜೆಪಿಗೆ ಅಧಿಕಾರದಿಂದ ದೂರವಿರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮ್ಮಿಶ್ರ ಸರಕಾರವನ್ನು ಅಸ್ಥಿರಗೊಳಿಸಲು ಒಂದಲ್ಲಾ ಒಂದು ಷಡ್ಯಂತ್ರವನ್ನು ರೂಪಿಸಲು ನಿರತವಾಗಿದೆ ಎಂದು ತಿಳಿಸಿದರು.

ಬಿಜೆಪಿಯ ಆಮಿಷಗಳಿಗೆ ಕಾಂಗ್ರೆಸ್ ಶಾಸಕರು ಜಗ್ಗುವುದಿಲ್ಲ. ಇಂತಹ ಆಮಿಷಗಳನ್ನು ರೂಪಿಸುವುದನ್ನು ಬಿಟ್ಟು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ತರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News