ಸನಾತನ ಸಂಸ್ಥೆಯ ಕಾರ್ಯಕರ್ತನ ಮನೆ ಮೇಲೆ ಭಯೋತ್ಪಾದನೆ ನಿಗ್ರಹ ದಳ ದಾಳಿ: ಬಾಂಬ್, ಸ್ಫೋಟಕಗಳು ಪತ್ತೆ

Update: 2018-08-10 08:01 GMT

ಹೊಸದಿಲ್ಲಿ, ಆ.10: ಮನೆಗೆ ದಾಳಿ ನಡೆಸಿದ ನಂತರ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್ ) ಸನಾತನ ಸಂಸ್ಥೆಗೆ ಸೇರಿದ ಓರ್ವನನ್ನು ಬಂಧಿಸಿದೆ. ಮನೆಯಲ್ಲಿ 8 ಕಚ್ಛಾ ಬಾಂಬ್ ಗಳು ಪತ್ತೆಯಾಗಿವೆ ಎಂದು scroll.in ವರದಿ ಮಾಡಿದೆ.

ಮುಂಬೈಯ ನಲಾ ಸೊಪಾರ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಬಂಧಿತನನ್ನು ವೈಭವ್ ರಾವತ್ ಎಂದು ಗುರುತಿಸಲಾಗಿದೆ. ವೈಭವ್ ಸಂಘಟನೆಯ ಸಕ್ರಿಯ ಸದಸ್ಯನಲ್ಲ ಎಂದು ಸನಾತನ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಆದರೆ ಆತನಿಗೆ ಕಾನೂನು ನೆರವನ್ನು ನೀಡಲಾಗುವುದು ಎಂದಿದೆ.

“ಆತ ಹಿಂದುತ್ವ ಕಾರ್ಯಕರ್ತನಲ್ಲ, ಸನಾತನ ಸಂಸ್ಥೆಯ ಸದಸ್ಯನೂ ಅಲ್ಲ. ಆತನ ಬಳಿ ಸ್ಫೋಟಕಗಳಿತ್ತು ಎನ್ನುವ ಎಟಿಎಸ್ ಆರೋಪದ ಬಗ್ಗೆ ನನಗೆ ಸಂಶಯಗಳಿವೆ” ಎಂದು ಸಂಸ್ಥೆಯ ವಕೀಲ ಸಂಜೀವ್ ಪುನೇಲಿಕರ್ ತಿಳಿಸಿದ್ದಾರೆ.

ಬಂಧಿತನನ್ನು ಪಾಲ್ಘಾರ್ ನಿಂದ ಮುಂಬೈಗೆ ಕರೆದೊಯ್ಯಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News