ಅತ್ಯಾಚಾರ ಮನಸ್ಥಿತಿಯಿಂದ ಸಮಾಜ ಹೊರಬರಬೇಕು: ಪ್ರಧಾನಿ ಮೋದಿ

Update: 2018-08-15 05:50 GMT

ಹೊಸದಿಲ್ಲಿ, ಆ.15: ‘ಅತ್ಯಾಚಾರ’ದ ಮನಸ್ಥಿತಿಯಿಂದ ನಮ್ಮ ಸಮಾಜವು ಹೊರಬರಬೇಕಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಕೆಂಪುಕೋಟೆಯಲ್ಲಿ 72ನೆ ಸ್ವಾತಂತ್ರ್ಯೋತ್ಸದ ಸಂದರ್ಭ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿದ ಮಧ್ಯಪ್ರದೇಶ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದರು.

“ನಮ್ಮ ಸಮಾಜ ಮತ್ತು ದೇಶವನ್ನು ಅತ್ಯಾಚಾರದ ಮನಸ್ಥಿತಿಯಿಂದ ಹೊರತರಬೇಕಾಗಿದೆ. ಇತ್ತೀಚೆಗೆ ಮಧ್ಯಪ್ರದೇಶ ನ್ಯಾಯಾಲಯವೊಂದು ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಿದೆ. ನಾವು ಜನರಿಗೆ ಅರಿವು ಮೂಡಿಸಬೇಕು, ಎಚ್ಚರಿಸಬೇಕು” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News