ಬೆಂಗಳೂರು: ಪ್ರವಾಹ ಸಂತಸ್ತರಿಗೆ ಜಿಲ್ಲಾಡಳಿತದಿಂದ ಪರಿಹಾರ ಸಾಮಗ್ರಿಗಳ ರವಾನೆ

Update: 2018-08-18 15:32 GMT

ಬೆಂಗಳೂರು, ಆ. 18: ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೊಡಗು ಜಿಲ್ಲೆ ಮಳೆ ಹಾಗೂ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ಹೊತ್ತ ಟ್ರಕ್‌ಗೆ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ಹಸಿರು ನಿಶಾನೆ ತೋರಿಸಿದರು.

ಸುಮಾರು 1 ಸಾವಿರ ಬ್ಲಾಂಕೆಟ್, 2 ಸಾವಿರ ಬೆಡ್‌ಶೀಟ್, 200 ಟಾರ್ಪಾಲಿನ್, 320 ಪ್ಲಾಸ್ಟಿಕ್ ಚಾಪೆಗಳನ್ನು ರವಾನಿಸಲಾಗುತ್ತಿದೆ. ಅಲ್ಲದೆ, ಬೇಕರಿ ಆಹಾರ ಪದಾರ್ಥಗಳಾದ ಬ್ರೆಡ್, ಬನ್, ರಸ್ಕ್ ಪ್ಯಾಕೆಟ್ ಇತ್ಯಾದಿ ಆಹಾರ ಸಾಮಗ್ರಿಗಳನ್ನು ಟ್ರಕ್‌ನೊಂದಿಗೆ ಕಳುಹಿಸಲಾಗುತ್ತಿದೆ.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News