ಮಳಿಗೆ ಉದ್ಘಾಟಿಸಿ ಪ್ರವಾಹ ಸಂತ್ರಸ್ತರಿಗಾಗಿ ನೆರವು ಯಾಚಿಸಿದ ನಟ ಯಶ್

Update: 2018-08-18 15:34 GMT

ಬೆಂಗಳೂರು, ಆ.18: ನಗರದ ಯಲಹಂಕ ಬಳಿ ಆರ್‌ಎಂಝಡ್ ಗ್ಯಾಲರಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಲೈಫ್‌ಸ್ಟೈಲ್ ಮಳಿಗೆಗೆ ಚಲನಚಿತ್ರ ನಟ ಯಶ್ ಚಾಲನೆ ನೀಡಿ, ಪ್ರಕೃತಿ ವಿಕೋಪದಿಂದಾಗಿ ತತ್ತರಿಸುತ್ತಿರುವ ಕೇರಳ ಮತ್ತು ಕೊಡಗು ಜನರಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.

ಇಲ್ಲಿನ ಮಳಿಗೆ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಕೇರಳ ಹಾಗೂ ಕೊಡಗು ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಅಪಾರವಾದ ನಷ್ಟವುಂಟಾಗಿದೆ. ಅಲ್ಲಿನ ಜನರು ಆಹಾರ, ನೀರಿಗಾಗಿ ಪರದಾಡುವಂತಾಗಿದೆ. ಹೀಗಾಗಿ, ಮಳಿಗೆಯ ಸಹಾಯಾರ್ಥವಾಗಿ ನೆರವು ನೀಡುವಂತೆ ಮನವಿ ಮಾಡಿದರು.

ಇಂದು ಎಲ್ಲವೂ ಫ್ಯಾಷನ್ ಆಗುತ್ತಿದೆ. ನಗರದಲ್ಲಿ ನನಗೆ ಇಷ್ಟವಾದ ಹಾಗೂ ನಾನಿರುವ ಸ್ಥಳಕ್ಕೆ ಹತ್ತಿರವಾದ ಜೀವನ ಶೈಲಿಗೆ ಚಾಲನೆ ನೀಡುತ್ತಿರುವುದು ಸಂತೋಷ ಸಂಗತಿ. ವಿದೇಶಗಳಲ್ಲಿ ಕಾಣಸಿಗುವ ಶೈಲಿ ಇಲ್ಲಿಗೂ ಲಗ್ಗೆಯಿಟ್ಟಿರುವುದು ಸಂತಸದ ವಿಚಾರವಾಗಿದೆ ಎಂದು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News