ಬೆಂಗಳೂರು: ಮೂವರು ಚಿನ್ನಾಭರಣ ಕಳವು ಆರೋಪಿಗಳ ಬಂಧನ

Update: 2018-08-18 16:19 GMT

ಬೆಂಗಳೂರು, ಆ.18: ರಾತ್ರಿ ವೇಳೆ ಮನೆಗಳ ಬಾಗಿಲು ಮುರಿದು ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ನಗರದ ಅಮೃತಹಳ್ಳಿ ಠಾಣಾ ಪೊಲೀಸರು 1.20 ಲಕ್ಷ ರೂ.ಮೌಲ್ಯದ 45 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ನಗರದ ಕೆಆರ್ ಪುರಂನ ಜಿನಾಪುರ ಕೊಳಗೇರಿ ನಿವಾಸಿ ಶೇಷಾದ್ರಿ (28), ದೇವಸಂದ್ರ ನಿವಾಸಿ ನಿಗ್ರೋ ಯಾನೆ ಕುಮಾರ್ (29) ಹಾಗೂ ಜಿನಾಫುರ ನಿವಾಸಿ ಕುಮಾರ್ (26) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಇವರ ಬಂಧನದಿಂದ ಎರಡು ಪ್ರಕರಣಗಳು ಬೆಳಕಿಗೆ ಬಂದಿದ್ದು, 1.20 ಲಕ್ಷ ರೂ. ಮೌಲ್ಯದ 42 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News