ಡಕಾಯಿತಿ: ಆರು ಜನರ ಸೆರೆ; ಅಪಾರ ಸೊತ್ತು ವಶ

Update: 2018-08-18 16:22 GMT

ಬೆಂಗಳೂರು, ಆ.18: ಡಕಾಯಿತಿಗೆ ಹೊಂಚು ಹಾಕುತ್ತಿದ್ದ ಆರೋಪದಡಿ 6 ಜನರನ್ನು ಬಂಧಿಸಿರುವ ಇಲ್ಲಿನ ಬಸವೇಶ್ವರನಗರ ಠಾಣೆ ಪೊಲೀಸರು, 4.30 ಲಕ್ಷ ಬೆಲೆಬಾಳುವ 51 ಗ್ರಾಂ ಚಿನ್ನಾಭರಣ, 20 ಮೊಬೈಲ್ ಹಾಗೂ 4 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ನಿವಾಸಿಗಳಾದ ಗುಣಶೇಖರ್, ಅಜಿತ್, ಲೋಕೇಶ್, ಅರುಣ್, ಮಂಜು ಮತ್ತು ನಿತ್ಯಾನಂದ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದು, ಕಳವು ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಶಿವಶಂಕರ್ ಎಂಬಾತನನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News