ಎಲ್ಲರನ್ನು ಪ್ರೀತಿಸಿದ್ದಕ್ಕೆ ನನ್ನನ್ನು ವಿರೋಧಿಸಿದರು: ಸಿದ್ದರಾಮಯ್ಯ

Update: 2018-08-19 14:24 GMT

ಬೆಂಗಳೂರು, ಆ.19: ನಾನು ಎಂದೂ, ಒಂದು ಧರ್ಮವನ್ನೇ ಗುರಿಯಾಗಿಸಿಕೊಂಡಿಲ್ಲ. ಬದಲಾಗಿ, ಸರ್ವ ಧರ್ಮಗಳನ್ನು ಪ್ರೀತಿಸುತ್ತೇನೆ. ಹೀಗಾಗಿಯೇ, ಕೆಲವರು ನಾನು ಹಿಂದೂ ವಿರೋಧಿ ಎಂದೆಲ್ಲಾ ಅಪಪ್ರಚಾರ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಏರ್ಪಡಿಸಿದ್ದ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾನು ಪರಿಪೂರ್ಣವಾಗಿ ಹಿಂದೂ ಧರ್ಮಕ್ಕೆ ಸೇರಿದವನು. ಆದರೆ, ನನ್ನ ವಿರುದ್ಧ ಉದ್ದೇಶ ಪೂರಕವಾಗಿ ಕೆಲವರು ಅಪಪ್ರಚಾರ ಮಾಡುತ್ತಾರೆ. ಏನೇ ಆಗಲಿ, ನಾನು ಸದಾ ಎಲ್ಲ ಜಾತಿಯವರನ್ನು, ಧರ್ಮದವರನ್ನು ಪ್ರೀತಿಸುತ್ತೇನೆ ಎಂದು ನುಡಿದರು.

ಸಿದ್ದರಾಮಯ್ಯ ಅವರನ್ನ ನಾನೇ ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ ಎಂದು ಕೆಲವರು ಹೇಳುತ್ತಾರೆ. ಆದರೆ ಅವರಿಗೆ ನಾಚಿಕೆಯಾಗಬೇಕು.  ನನ್ನನ್ನು ಅಹ್ಮದ್ ಪಟೇಲ್, ಫೀರಾನ್ ಕಾಂಗ್ರೆಸ್‌ಗೆ ಸೇರಿಸಿದರು ಎಂದು ಪರೋಕ್ಷವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ವಿರುದ್ಧ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News