ವೆಂಕಯ್ಯ ನಾಯ್ಡು ಸಹಿತ ಹಲವರಿಂದ ನೆರೆ ಪರಿಹಾರ ನಿಧಿಗೆ ದೇಣಿಗೆ
Update: 2018-08-20 17:06 GMT
ಹೊಸದಿಲ್ಲಿ, ಆ.20: ಉಪ ರಾಷ್ಟ್ರಪತಿ, ರಾಜ್ಯ ಸಭೆಯ ಉಪ ಸಭಾಪತಿ ವೆಂಕಯ್ಯ ನಾಯ್ಡು ಅವರು ರಾಜ್ಯ ಸಭೆಯ ಇತರ ಸದಸ್ಯರೊಂದಿಗೆ ತಮ್ಮ ಒಂದು ತಿಂಗಳ ವೇತವನ್ನು ಕೇರಳ ಸರಕಾರದ ನೆರೆ ಪರಿಹಾರ ನಿಧಿಗೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
ಶಿವಸೇನೆಯ ಎಲ್ಲ ಸಂಸದರು ಹಾಗೂ ಶಾಸಕರು ಕೂಡ ತಮ್ಮ ಒಂದು ತಿಂಗಳ ವೇತನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ. ಟಿಆರ್ಎಸ್ನ ಸಂಸದರು ಕೂಡ ತಮ್ಮ ಒಂದು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ. ತೆಲಂಗಾಣ ಉಪ ಮುಖ್ಯಮಂತ್ರಿ ಮುಹಮ್ಮದ್ ಮಹ್ಮೂದ್ ಅಲಿ, ಪಂಜಾಬ್ನ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ತಮಿಳುನಾಡಿನ ಮುಖ್ಯಮಂತ್ರಿ ಇ. ಪಳನಿಸ್ವಾಮಿ, ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಕೂಡ ನೆರೆ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ವೇತನ ನೀಡಿದ್ದಾರೆ. ತನ್ನ ಒಂದು ತಿಂಗಳ ವೇತನದೊಂದಿಗೆ ಪಂಜಾಬ್ನ ಎಲ್ಲ ಕಾಂಗ್ರೆಸ್ ಸಂಸದರು ಹಾಗೂ ಶಾಸಕರು ತಮ್ಮ ಒಂದು ತಿಂಗಳ ವೇತನ ನೀಡಲಿದ್ದಾರೆ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.