ಬೆಂಗಳೂರು: ಬೀದಿ ನಾಯಿ ದಾಳಿಗೊಳಗಾಗಿದ್ದ ಬಾಲಕ ಪ್ರವೀಣ್ ಸಾವು

Update: 2018-09-02 12:16 GMT

ಬೆಂಗಳೂರು, ಸೆ.02: ಕೆಲ ದಿನಗಳ ಹಿಂದೆ ಬೀದಿನಾಯಿ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ಕು ವರ್ಷದ ಮಗು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. 

ಎಚ್.ಎ.ಎಲ್. ಪೊಲೀಸ್ ಠಾಣಾ ವ್ಯಾಪ್ತಿಯ ವಿಭೂತಿಪುರದ ಮನೋಜ್‌ ಎಂಬವರ ಪುತ್ರ ಪ್ರವೀಣ್ ಬುಧವಾರ ಸಂಜೆ ನಾಯಿಗಳ ದಾಳಿಗೊಳಗಾಗಿದ್ದ. ಮನೆ ಪಕ್ಕ ಆಟವಾಡುತ್ತಿದ್ದ ಪ್ರವೀಣ್‌ನ ಮೇಲೆ 10ಕ್ಕೂ ಅಧಿಕ ಬೀದಿನಾಯಿಗಳು ದಾಳಿ ನಡೆಸಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದ ಪ್ರವೀಣ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ನಾಯಿ ದಾಳಿ ನಿಯಂತ್ರಣದಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಬೆಂಗಳೂರಿನಲ್ಲಿ ನಾಯಿ ದಾಳಿಗೆ ಇದು 62ನೇ ಬಲಿ ಎನ್ನಲಾಗಿದೆ. 

ಪರಿಹಾರ ಘೋಷಣೆ: ಮೃತ ಪ್ರವೀಣ್ ಕುಟುಂಬಕ್ಕೆ ಮೇಯರ್ ಸಂಪತ್ ರಾಜ್ ಪರಿಹಾರ ಘೋಷಣೆ ಮಾಡಿದ್ದು, ಮೃತ ಬಾಲಕನ ಕ್ರಿಯಾವಿಧಿಗಳಿಗೆ ಹತ್ತು ಸಾವಿರ ಹಾಗೂ ಮೃತನ ಕುಟುಂಬಕ್ಕೆ ಐದು ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ, ವಿಭೂತಿಪುರ ಬಳಿಯ ಸ್ಲಂನಲ್ಲಿ ಮನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News