ಬೆಂಗಳೂರು: ಸ್ನೇಹಿತನಿಗೆ ಚಾಕು ಇರಿತ

Update: 2018-09-03 13:23 GMT

ಬೆಂಗಳೂರು, ಸೆ.3: ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನಿಗೆ ಚಾಕು ಇರಿದ ಘಟನೆ ಇಲ್ಲಿನ ಗಂಗಮ್ಮನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತರಭಾರತ ಮೂಲದ ಹರೇರಾಮ್ (22) ಎಂಬಾತ ಚಾಕು ಇರಿತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಕಮ್ಮಗೊಂಡನಹಳ್ಳಿಯಲ್ಲಿ ಹರೇರಾಮ್ ಮತ್ತು ಅವರ ಸ್ನೇಹಿತ ಕಿಶನ್ ಒಂದೇ ಮನೆಯಲ್ಲಿ ವಾಸವಿದ್ದರು. ರವಿವಾರ ರಾತ್ರಿ ಆರೋಪಿ ಕಿಶನ್, ಗುಟ್ಕಾ ತರುವಂತೆ ಹರೇರಾಮ್‌ಗೆ ಹೇಳಿದ್ದಾರೆ. ಗುಟ್ಕಾ ತರಲು ನಿರಾಕರಿಸಿದ ಹರೇರಾಮ್ ಮತ್ತು ಕಿಶನ್ ನಡುವೆ ಜಗಳ ಉಂಟಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕಿಶನ್ ಚಾಕುನಿಂದ ಹರೇರಾಮ್ ಹೊಟ್ಟೆಗೆ ಇರಿದಿರುವುದಾಗಿ ತಿಳಿದುಬಂದಿದೆ.

ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗಂಗಮ್ಮನಗುಡಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News