ಅಪಘಾತ ನಡೆಸಿದ ಟ್ರಕ್ ಚಾಲಕನ ಥಳಿಸಿ ಹತ್ಯೆಗೈದ ಗ್ರಾಮಸ್ಥರು
Update: 2018-09-10 06:44 GMT
ರಾಂಚಿ,ಸೆ.10 : ಜಾರ್ಖಂಡ್ ರಾಜ್ಯದ ದುಮ್ಕ ಜಿಲ್ಲೆಯ ಸಿಮನಿಜೋರೆ ಗ್ರಾಮದಲ್ಲಿ ವೇಗವಾಗಿ ಚಲಿಸುತ್ತಿದ್ದ ಟ್ರಕ್ ಎರಡು ವರ್ಷದ ಬಾಲಕನೊಬ್ಬನ ಮೇಲೆ ಹರಿದು, ಬಾಲಕ ದಾರುಣ ಸಾವನ್ನಪ್ಪಿದ ಬೆನ್ನಿಗೇ ಸ್ಥಳೀಯರ ಗುಂಪೊಂದು ಟ್ರಕ್ ಚಾಲಕನನ್ನು ಥಳಿಸಿ ಹತ್ಯೆಗೈದಿದೆ.
ಬಾಲಕ ಸುಬಿತ್ ಮಾರಂಡಿ ತನ್ನ ಮನೆಯ ಪಕ್ಕ ತನ್ನ ಸೋದರಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಬಾಲಕನ ಸೋದರಿ ಬೊಬ್ಬೆ ಹೊಡೆಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಗುಂಪು ಸೇರಿ ಚಾಲಕನನ್ನು ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.