ಬೆಂಗಳೂರು: ಗಣೇಶ ವಿಸರ್ಜನೆಗೆ ನಗರದ ವಿವಿಧೆಡೆ ಸಂಚಾರಿ ವಿಸರ್ಜನೆ ವಾಹನಗಳ ವ್ಯವಸ್ಥೆ

Update: 2018-09-12 14:32 GMT

ಬೆಂಗಳೂರು, ಸೆ.12: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿನಾಯಕ ಮೂರ್ತಿಗಳನ್ನು ವಿಸರ್ಜಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೆ.13 ಗುರುವಾರರಂದು ನಗರದ ಪ್ರತಿ ಪ್ರಾದೇಶಿಕ ಕಚೇರಿಗಳಲ್ಲಿ ಸಂಚಾರಿ ವಿಸರ್ಜನಾ ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು ನಗರ ದಕ್ಷಿಣ, ಬೆಂಗಳೂರು ನಗರ ಪಶ್ಚಿಮ, ಬೊಮ್ಮನಹಳ್ಳಿ, ಬೆಂಗಳೂರು ನಗರ ಪೂರ್ವ, ದಾಸರಹಳ್ಳಿ, ಯಲಹಂಕ, ಪೀಣ್ಯ, ರಾಜರಾಜೇಶ್ವರಿ ನಗರ, ಮಹದೇವಪುರ, ದೊಡ್ಡಬಳ್ಳಾರಪುರ, ಸರ್ಜಾಪುರ, ನೆಲಮಂಗಲ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚಾರಿ ವಿಸರ್ಜನಾ ವಾಹನಗಳು ಸಂಚರಿಸಲಿವೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ಗಣೇಶ ಮೂರ್ತಿಯನ್ನು ಈ ವಾಹನಗಳಲ್ಲಿ ವಿಸರ್ಜನೆ ಮಾಡಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News