ವಾಹನ ಕಳ್ಳತನದ ಶಂಕೆಯಲ್ಲಿ ಯುವಕನ ಥಳಿಸಿ ಹತ್ಯೆ

Update: 2018-09-15 11:07 GMT

ಗುವಾಹಟಿ, ಸೆ.15: ವಾಹನ ಕಳವು ಮಾಡಿದ್ದಾನೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬರನ್ನು ಥಳಿಸಿ ಕೊಂದಿರುವ ಘಟನೆ ಮಣಿಪುರದ ಇಂಫಾಲ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ. ಸಂತ್ರಸ್ತ ಯುವಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದು, ಸಮೀಪದಲ್ಲಿ ಕೋಮುಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿದೆ.

ಥರೋಯ್ಜಾಮ್  ಗ್ರಾಮದ ನಿವಾಸಿಯಾಗಿರುವ 26 ವರ್ಷದ ಫಾರೂಕ್ ಖಾನ್ ರನ್ನು ತಡೆದ ಗುಂಪೊಂದು ಅವರನ್ನು ಥಳಿಸಿ ಕೊಂದಿತ್ತು. ಫಾರೂಕ್ ಜೊತೆಗಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು.

ಇಷ್ಟೇ ಅಲ್ಲದೆ ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಗ್ರಾಮಸ್ಥರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದು, ಘಟನೆಯಲ್ಲಿ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News