ಹೊಸದಿಲ್ಲಿ: ಮುಚ್ಚಿದ ಮನೆಯ ಬಾಗಿಲ ಬೀಗ ಒಡೆದ ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್

Update: 2018-09-18 09:00 GMT

ಹೊಸದಿಲ್ಲಿ, ಸೆ.18: ಯಾವುದೇ ಅನುಮತಿ ಪಡೆಯದೇ ಮುಚ್ಚಿದ ಮನೆಯ ಬಾಗಿಲ ಬೀಗವನ್ನು ಒಡೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿಯ ಬಿಜೆಪಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ವಿರುದ್ಧ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ.

ಗೋಕುಲ್‌ಪುರಿ ಪೊಲೀಸ್ ಸ್ಟೇಶನ್‌ನಲ್ಲಿ ಉತ್ತರ ವಲಯ ಎಂಸಿಡಿ ಉಪ ನಿರ್ದೇಶಕರು ನೀಡಿರುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅತುಲ್‌ಕುಮಾರ್ ಠಾಕೂರ್ ತಿಳಿಸಿದ್ದಾರೆ.

 ರವಿವಾರ ಗೋಕುಲ್‌ಪುರಿ ಪ್ರದೇಶಕ್ಕೆ ತನ್ನ ಬೆಂಬಲಿಗರೊಂದಿಗೆ ತೆರಳಿದ್ದ ಮನೋಜ್ ತಿವಾರಿ ಅನಧಿಕೃತ ಕಾಲೋನಿಯಲ್ಲಿದ್ದ ಮುಚ್ಚಿದ ಮನೆಯೊಂದರ ಬಾಗಿಲ ಬೀಗವನ್ನು ಒಡೆದು ತೆಗೆದಿದ್ದರು. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News