ಕೆಸಿಎಫ್ ಸೀಬ್ ಝೋನ್: ಗಲ್ಫ್ ಇಶಾರ ಚಂದಾ ಅಭಿಯಾನ

Update: 2018-09-22 11:22 GMT

ಸೀಬ್, ಸೆ.22: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಒಮನ್ ಸಮಿತಿಯ ಅಧೀನದ ಸೀಬ್ ಝೋನ್ ವತಿಯಿಂದ 2018-19ನೇ ಸಾಲಿನ ಗಲ್ಫ್ ಇಶಾರ ಚಂದಾ ಅಭಿಯಾನದ ಉದ್ಘಾಟನೆ ಇತ್ತೀಚೆಗೆ ಮಬೇಲಾದಲ್ಲಿ ನಡೆಯಿತು.

ಕೆಸಿಎಫ್ ಒಮನ್ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಸೈಯದ್ ಆಬಿದ್ ಹೈದ್ರೋಸ್ ಎಮ್ಮೆಮ್ಮಾಡು ದುಆ ನೆರವೇರಿಸಿದರು. ಸೀಬ್ ಝೋನ್ ಸಂಘಟನಾ ಕಾರ್ಯದರ್ಶಿ ಹನೀಫ್ ಕೆ.ಸಿ.ರೋಡ್ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾದಿಕ್ ಸುಳ್ಯ ಮಾತನಾಡಿ, ಚಂದಾ ಅಭಿಯಾನವು ಸೆ.15ರಿಂದ ಆರಂಭಗೊಂಡಿದ್ದು, ಅಕ್ಟೋಬರ್ 15ರ ತನಕ ನಡೆಯಲಿದೆ. ಅತೀ ಹೆಚ್ಚು ಅನಿವಾಸಿ ಕನ್ನಡಿಗರನ್ನು ಚಂದಾದಾರರನ್ನಾಗಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಸೈಯದ್ ಆಬಿದ್ ಹೈದ್ರೋಸ್ ಪ್ರಥಮ ಚಂದಾದಾರರಾಗುವ ಮೂಲಕ ಚಂದಾ ಅಭಿಯಾನಕ್ಕೆ ಚಾಲನೆ ನೀಡಿದರು.

 ಶರೀಫುಲ್ಲಾ ನಾವುಂದ ಸ್ವಾಗತಿಸಿದರು. ಮುನೀರ್ ಮಧ್ಯನಡ್ಕ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News