ಕಳವು ಪ್ರಕರಣ: ಮೂವರ ಬಂಧನ

Update: 2018-09-28 14:04 GMT

ಬೆಂಗಳೂರು, ಸೆ.28: ಕಳವು ಪ್ರಕರಣ ಸಂಬಂಧ ಮೂವರನ್ನು ಇಲ್ಲಿನ ಎಚ್‌ಎಸ್‌ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ದಿನೇಶ್, ಸಚಿನ್ ಹಾಗೂ ಶ್ರೇಯಸ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.19ರ ರಾತ್ರಿ ಹೆಚ್‌ಎಸ್‌ಆರ್ ಲೇಔಟ್ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಪೆಟ್ರೋಲ್ ಬಂಕ್ ಮಾಲಕ ಸತ್ಯನಾರಾಯಣ ಎಂಬುವರನ್ನು ಬೆದರಿಸಿ 5ಲಕ್ಷ ನಗದು ಹಾಗೂ ದಾಖಲಾತಿ ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದರು.

ಈ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಾಲಾಗಿತ್ತು. ಪೊಲೀಸರು ಸತ್ಯನಾರಾಯಣ ಮನೆಯಲ್ಲೇ ಇದ್ದ ಕಾರು ಚಾಲಕ ದಿನೇಶ್ ಮೇಲೆ ಅನುಮಾನಗೊಂಡು ತನಿಖೆ ನಡೆಸಿದಾಗ ಆತ ತಪ್ಪುಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬಂಧಿತರಿಂದ 3.10 ಲಕ್ಷ ಹಣ, 3 ಮೊಬೈಲ್ ಜಪ್ತಿ ಮಾಡಿ, ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News