ವಿಜ್ಞಾನ, ಇಂಜಿನಿಯರಿಂಗ್ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2018-10-08 14:06 GMT

ಬೆಂಗಳೂರು, ಅ.8: ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು ವಿಜ್ಞಾನ ಮತ್ತು ಇಂಜಿನಿಯರ್ ಪದವೀಧರರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ನೀಡುವ ಸರ್ ಎಂ.ವಿಶ್ವೇಶ್ವರಯ್ಯ, ಡಾ.ರಾಜಾ ರಾಮಣ್ಣ, ಸರ್.ಸಿ.ವಿ.ರಾಮನ್, ಪ್ರೊ.ಸತೀಶ್ ಧವನ್ ಮತ್ತು ಡಾ.ಕಲ್ಪನಾ ಚಾವ್ಲಾ ವಿಜ್ಞಾನ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ನ.16 ಕೊನೆಯ ದಿನವಾಗಿದೆ. ಈ ಕುರಿತು ಹೆಚ್ಚಿನ ವಿವರಗಳಿಗೆ www.kscst.org.in,   www.kscst.lisc.arnet.in ನಲ್ಲಿ ಹಾಗೂ ದೂ.080-23341652, 23348848 ಇಲ್ಲಿಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News