ವಿಜಯ್ ಹಝಾರೆ ಟ್ರೋಫಿ: ದಿಲ್ಲಿ, ಮುಂಬೈ ಸೆಮಿಫೈನಲ್ ಗೆ

Update: 2018-10-14 18:45 GMT

ಮುಂಬೈ, ಅ.14: ವಿಜಯ್ ಹಝಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಮತ್ತು ದಿಲ್ಲಿ ಸೆಮಿಫೈನಲ್ ಪ್ರವೇಶಿಸಿವೆ. ಇಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಬಿಹಾರ್ ವಿರುದ್ಧ ಮುಂಬೈ ತಂಡ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿತು.

 ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಹರ್ಯಾಣ ವಿರುದ್ಧ ದಿಲ್ಲಿ 5 ವಿಕೆಟ್‌ಗಳ ಜಯ ಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಿಹಾರ ತಂಡ ತುಷಾರ್ ದೇಶಪಾಂಡೆ (23ಕ್ಕೆ 5)ದಾಳಿಗೆ ಸಿಲುಕಿ 28.2 ಓವರ್‌ಗಳಲ್ಲಿ 69 ರನ್‌ಗಳಿಗೆ ಆಲೌಟಾಗಿತ್ತು. ಬಬುಲ್ ಕುಮಾರ್ (16) ಮತ್ತು ರಹ್ಮತುಲ್ಲಾ (18) ಮಾತ್ರ ಎರಡಂಕೆಯ ಸ್ಕೋರ್ ದಾಖಲಿಸಿದರು ಗೆಲುವಿಗೆ 70 ರನ್‌ಗಳ ಸವಾಲನ್ನು ಪಡೆದ ಮುಂಬೈ ತಂಡ 12.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ ಅಗತ್ಯದ ರನ್ ಗಳಿಸಿತು. ಅಖಿಲ್ ಹೆರ್ವಾಡ್ಕರ್ 24 ರನ್, ರೋಹಿತ್ ಶರ್ಮಾ ಔಟಾಗದೆ 33 ರನ್ ಮತ್ತು ಆದಿತ್ಯ ತಾರೆ ಔಟಾಗದೆ 6 ರನ್ ಗಳಿಸಿದರು.

ಗಂಭೀರ್ ಶತಕ : ದಿಲ್ಲಿಗೆ ಜಯ

 ಬೆಂಗಳೂರಿನಲ್ಲಿ ನಡೆದ ವಿಜಯ್ ಹಝಾರೆ ಟ್ರೋಫಿಯ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಹರ್ಯಾಣ ವಿರುದ್ಧ ದಿಲ್ಲಿ ತಂಡ ನಾಯಕ ಗೌತಮ್ ಗಂಭೀರ್ ಶತಕ(104) ನೆರವಿನಲ್ಲಿ 5 ವಿಕೆಟ್‌ಗಳ ಜಯ ಗಳಿಸಿದೆ.

   ಹರ್ಯಾಣ ತಂಡ 49.1 ಓವರ್‌ಗಳಲ್ಲಿ 229 ರನ್‌ಗಳಿಗೆ ಆಲೌಟಾಗಿತ್ತು. 230 ರನ್‌ಗಳ ಸವಾಲನ್ನು ಪಡೆದ ದಿಲ್ಲಿ 39.2 ಓವರ್‌ಗಳಲ್ಲಿ 230 ರನ್ ಗಳಿಸಿತು. ಗೌತಮ್ ಗಂಭೀರ್ ಶತಕದ (104 ) ಮತ್ತು ಧ್ರುವ್ ಶೊರೈ ಅರ್ಧಶತಕ (50) ದಾಖಲಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News