ಉತ್ತರ ಪ್ರದೇಶ: ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕನ ಪುತ್ರನಿಂದ ಗುಂಡು ಹಾರಾಟ; ಪತ್ರಕರ್ತನಿಗೆ ಗಾಯ

Update: 2018-10-19 16:20 GMT

ಲಕ್ನೋ, ಅ.19: ಆರೆಸ್ಸೆಸ್ ವತಿಯಿಂದ ನಡೆದ ‘ಶಸ್ತ್ರಪೂಜೆ’ಯಲ್ಲಿ ಬಿಜೆಪಿ ಶಾಸಕ ಹರಿಶಂಕರ್ ಮಹೌರ್ ರ ಪುತ್ರ ಹಾರಿಸಿದ ಗುಂಡು ತಗಲಿ ಪತ್ರಕರ್ತರೊಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ ಎಂದು indiatoday.in  ವರದಿ ಮಾಡಿದೆ.

ಪತ್ರಕರ್ತ ವಿನೋದ್ ಶರ್ಮಾರ ಕುತ್ತಿಗೆಗೆ ಗಾಯವಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯದಶಮಿಯ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ವರದಿಯಾಗಿದೆ.

ಕಾನೂನನ್ನು ಉಲ್ಲಂಘಿಸಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಯೋಜಕರು ಸಾರ್ವಜನಿಕವಾಗಿಯೇ ಮಾರಕಾಯುಧಗಳನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕರೂ ಸಹ ಆಯುಧಗಳನ್ನು ಹಿಡಿದುಕೊಂಡಿರುವ ಫೋಟೊ ವೈರಲ್ ಆಗಿದೆ.

ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆಯ ಗುಂಡು ಹಾರಾಟ ನಡೆದಿದ್ದು, ತನ್ನ ಪುತ್ರನೂ ಭಾಗವಹಿಸಿದ್ದ ಎಂದು ಶಾಸಕರು ಒಪ್ಪಿಕೊಂಡಿದ್ದಾರೆ. ಇಲ್ಲಿ ನಡೆದದ್ದು ಅಕ್ರಮ. ಆಡಳಿತವು ಕಾರ್ಯಕ್ರಮ ನಡೆಸಲು ಅನುಮತಿ ನೀಡಿರಲಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News