ದಾಂತೇವಾಡದಲ್ಲಿ ನಕ್ಸಲರ ಅಟ್ಟಹಾಸ : ಇಬ್ಬರು ಯೋಧರು ಸೇರಿದಂತೆ ಐವರು ಬಲಿ

Update: 2018-11-08 09:06 GMT

ದಾಂತೇವಾಡ, ನ.8: ಛತ್ತೀಸ್ ಗಡದ ದಾಂತೇವಾಡದಲ್ಲಿ  ನಕ್ಸಲರು ಸುಧಾರಿತ ಸ್ಫೋಟ ಸಾಧನೆ ಬಳಸಿ  ಸಿಐಎಸ್ ಎಫ್ ವಾಹನವನ್ನು ಸ್ಫೋಟಿಸಿದ ಪರಿಣಾಮವಾಗಿ ಕೇಂದ್ರಿಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ ಎಫ್) ಇಬ್ಬರು ಯೋಧರು ಸೇರಿದಂತೆ ಐವರು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಮೃತಪಟ್ಟವರಲ್ಲಿ ಮೂವರು ನಾಗರಿಕರು ಸೇರಿದ್ದಾರೆ. ಏಳು ಮಂದಿ ಸಿಐಎಸ್ ಎಫ್ ಯೋಧರು ಗಾಯಗೊಂಡಿದ್ದಾರೆ.

10 ದಿನಗಳ ಅವಧಿಯಲ್ಲಿ ನಕ್ಸಲರಿಂದ ನಡೆದ ಎರಡನೇ  ದೊಡ್ಡ ದಾಳಿ ಇದಾಗಿದೆ. ಅ.30ರಂದು ನಡೆದ ನಕ್ಸಲರ ದಾಳಿಯಲ್ಲಿ ದೂರದರ್ಶನದ ಕ್ಯಾಮರಾಮ್ಯಾನ್ ಆಚ್ಯುತಾನಂದ ಸಾಹು  ಮೃತಪಟ್ಟಿದ್ದರು.ಇಬ್ಬರು ಪೊಲೀಸರು ಗಾಯಗೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News