ಪ್ರವಾದಿ ಚರ್ಯೆಯನ್ನು ಜೀವನದಲ್ಲಿ ಅಳವಡಿಸಿ: ಝೈನಿ ಉಸ್ತಾದ್

Update: 2018-11-17 17:45 GMT

ಒಮಾನ್, ನ. 17: ಕೆಸಿಎಫ್ ಒಮನ್ ಸೊಹಾರ್ ಝೋನ್ ಹಮ್ಮಿಕೊಂಡ ಇಲೈಕ ಯಾರಸೂಲಲ್ಲಾಹ್ ಮೀಲಾದ್ ಕಾರ್ಯಕ್ರಮವು ಮನಮ್ ಸೊಹಾರ್ ಹೋಟೆಲ್ ಪಲಝ್ ನಲ್ಲಿ ಝೋನ್ ಅಧ್ಯಕ್ಷ ಆರಿಫ್ ಮದಕ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸಯ್ಯದ್ ಆಬಿದ್ ಅಲ್ ಹೈದ್ರೋಸಿ ಇವರು ನೆರವೇರಿಸಿ ಪ್ರವಾದಿ ಮುಹಮ್ಮದ್ ಸ.ಅ. ಅವರ ಸಂದೇಶ ಮತ್ತು 48ನೇ ಒಮಾನ್ ರಾಷ್ಟ್ರೀಯ ದಿನಾಚರಣೆಯ ಶುಭಾಶಯವನ್ನು ಕೋರಿದರು.

ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿದ ಕೆಸಿಎಫ್ ಅಂತರಾಷ್ಟ್ರೀಯ ಸಂಘಟನಾ ಅಧ್ಯಕ್ಷ  ಎಂಎಸ್ ಎಂ ಅಬ್ದುಲ್ ರಶೀದ್ ಝೈನಿ ಖಾಮಿಲ್ ಸಖಾಫಿ ಪ್ರವಾದಿ ಮುಹಮ್ಮದ್ ಸ.ಅ. ರವರು ಈ ಜಗತ್ತಿಗೆ ಸಾರಿದ ಶಾಂತಿಯ ಸಂದೇಶ ಹಾಗು ಅವರ ಜೀವನ ಚರ್ಯೆಯನ್ನು ತಮ್ಮೆಲ್ಲರ ಜೀವನದಲ್ಲಿ ಅಳವಡಿಸಲು ಕರೆ ನೀಡೂವುದರೊಂದಿಗೆ ಡಿಸೆಂಬರ್ 3 ರಂದು ಕೆಸಿಎಫ್, ಎಸ್ಸೆಸ್ಸೆಫ್, ಎಸ್ ವೈ ಎಸ್ ವತಿಯಿಂದ ಮಂಗಳೂರಿನಲ್ಲಿ ಜರುಗಲಿರುವ ಕನೆಕ್ಟ್ 2018 ಈ ಕಾರ್ಯಕ್ರಮದ ವಿಷೇಷತೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆಸಿಎಫ್ ಒಮಾನ್ ಗೌರವಾಧ್ಯಕ್ಷ ಉಮರ್ ಸಖಾಫಿ ಮಿತ್ತೂರು, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ರಹಮಾನ್ ಮೊಗರ್ಪಣೆ ಸುಳ್ಯ,  ಮನೋಜ್ ಕುಮಾರ್ ವ್ಯವಸ್ಥಾಪಕರು ಬದ್ರ್ ಅಲ್ ಸಮಾ ಆಸ್ಪತ್ರೆ, ಮಹಮ್ಮದಲಿ ಸಖಾಫಿ ವಯನಾಡ್ ಇವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ಹನೀಫ್ ಸಅದಿ ಕುಡ್ತಮುಗೇರು, ಝುಬೈರ್ ಸಅದಿ ಪಟ್ರಾಕೋಡಿ, ಉಬೈದುಲ್ಲಾ ಸಖಾಫಿ, ಸಾದಿಕ್ ಸುಳ್ಯ, ಶಫೀಕ್ ಮಾರ್ನಬೈಲು, ಅಶ್ರಫ್ ಭಾರತ್ ಸುಳ್ಯ ಇವರು ಉಪಸ್ಥಿತರಿದ್ದರು. ಕೆಸಿಎಫ್ ಸೊಹಾರ್ ಝೋನಿನ ಉತ್ತಮ ಸಂಘಟಕ  ವರ್ಷದ ಪ್ರಶಸ್ತಿಯನ್ನು ಇಕ್ಬಾಲ್ ಎರ್ಮಾಳ್ ಮತ್ತು ಸಾದಿಕ್ ಕಾಟಿಪಳ್ಳ ಇವರು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಫಖ್ರೇ ಆಲಂ ರಝ್ವಿ ಮುಂಬೈ ಅವರು ನಅತೇ ಶರೀಫ್ ಹಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಕೆಸಿಎಫ್ ಸೊಹಾರ್ ಝೋನ್ ಕಾರ್ಯಕರ್ತರು ಮೌಲೂದ್ ಪಾರಾಯಣ, ಬುರ್ದಾ ಮಜ್ಲಿಸ್ ನಡೆಸಿಕೊಟ್ಟರು. ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಲಿ ಸುಳ್ಯ  ಸ್ವಾಗತಿಸಿ, ಝೋನ್ ಕಾರ್ಯದರ್ಶಿ ಅಶ್ರಫ್ ಕುತ್ತಾರ್ ವಂದಿಸಿ, ಕಲಂದರ್ ಬಾವ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News