ಉ. ಪ್ರದೇಶದಲ್ಲಿ ‘ಗುಂಪು ಹತ್ಯೆ’ ನಡೆದಿಲ್ಲ, ಬುಲಂದ್ ಶಹರ್ ಘಟನೆ ‘ಆಕಸ್ಮಿಕ’: ಆದಿತ್ಯನಾಥ್
Update: 2018-12-07 15:11 GMT
ಲಕ್ನೋ, ಡಿ.7: ಉತ್ತರ ಪ್ರದೇಶದಲ್ಲಿ ಯಾವುದೇ ‘ಗುಂಪು ಹತ್ಯೆ’ ನಡೆದಿಲ್ಲ ಎಂದಿರುವ ಸಿಎಂ ಆದಿತ್ಯನಾಥ್ ಬುಲಂದ್ ಶಹರ್ ನಲ್ಲಿ ಪೊಲೀಸ್ ಅಧಿಕಾರಿಯ ಹತ್ಯೆ ಒಂದು ‘ಆಕಸ್ಮಿಕ’ ಎಂದಿದ್ದಾರೆ.
ಗೋಹತ್ಯೆ ನಡೆದಿದೆ ಎನ್ನುವ ವದಂತಿಗಳ ಬಳಿಕ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ರನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು.
“ರಾಜ್ಯದಲ್ಲಿ ಯಾವುದೇ ಗುಂಪು ಹತ್ಯೆ ನಡೆದಿಲ್ಲ. ಬುಲಂದ್ ಶಹರ್ ಘಟನೆ ಒಂದು ಆಕಸ್ಮಿಕ” ಎಂದು ಹೇಳಿದರು. ‘ಗುಂಪು ಹಲ್ಲೆಗಳನ್ನು ತಡೆಯಲು ಸರಕಾರ ಯಾವ ಕ್ರಮ ಕೈಗೊಂಡಿದೆ’ ಎನ್ನುವ ಪ್ರಶ್ನೆಗಳಿಗೆ ಅವರು ಈ ರೀತಿಯಾಗಿ ಉತ್ತರಿಸಿದರು.