ಧನಂಜಯ ಅಮಾನತು

Update: 2018-12-11 04:57 GMT

ಕೊಲಂಬೊ, ಡಿ.10: ಶಂಕಾಸ್ಪದ ಬೌಲಿಂಗ್ ಶೈಲಿಯ ಕಾರಣಕ್ಕಾಗಿ ಶ್ರೀಲಂಕಾದ ಆಫ್ ಸ್ಪಿನ್ನರ್ ಅಖಿಲ ಧನಂಜಯ ಅವರನ್ನು ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಬೌಲಿಂಗ್ ಮಾಡುವುದರಿಂದ ಅಮಾನತು ಮಾಡಲಾಗಿದೆ ಎಂದು ಐಸಿಸಿ ತಿಳಿಸಿದೆ. ಧನಂಜಯ ಅವರ ಬೌಲಿಂಗ್ ಶೈಲಿಯನ್ನು ಕಳೆದ ತಿಂಗಳು ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪ್ರಶ್ನಿಸಲಾಗಿತ್ತು.

ಅಸ್ಟ್ರೇಲಿಯದ ಬ್ರಿಸ್ಬೇನ್‌ನ ರಾಷ್ಟ್ರೀಯ ಕ್ರಿಕೆಟ್ ಸೆಂಟರ್‌ನಲ್ಲಿ ಬೌಲಿಂಗ್ ಶೈಲಿಯ ಸ್ವಯಂ ವೌಲ್ಯಮಾಪನ ಮಾಡಿಕೊಳ್ಳಲು ಆದೇಶಿಸಲಾಗಿತ್ತು. ಈ ವೇಳೆ ಅನುಮತಿಸಿದ ನಿಯಮಾವಳಿಗಳ ಪ್ರಕಾರ ಅವರ ಎಸೆತಗಳು ಸೂಕ್ತವಾಗಿಲ್ಲದಿರುವುದು, 15 ಡಿಗ್ರಿ ಪ್ರಮಾಣವನ್ನು ಮೀರಿದ್ದು ಕಂಡುಬಂದಿದೆ ಎಂದು ಐಸಿಸಿ ಹೇಳಿಕೆಯೊಂದಲ್ಲಿ ತಿಳಿಸಿದೆ.

ಧನಂಜಯ ತನ್ನ ಬೌಲಿಂಗ್ ಶೈಲಿಯನ್ನು ತಿದ್ದಿಕೊಂಡ ಬಳಿಕ ಹೊಸ ವೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಆದಾಗ್ಯೂ ಸ್ಥಳೀಯ ಪಂದ್ಯಗಳಲ್ಲಿ ಭಾಗವಹಿಸಲು ಅವರಿಗೆ ಐಸಿಸಿ ಅನುಮತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News