ಮಕ್ಕಳಾಗದ ಕೊರಗು: ಮಹಿಳೆ ನೇಣಿಗೆ ಶರಣು

Update: 2018-12-13 13:40 GMT

ಬೆಂಗಳೂರು, ಡಿ. 13: ಮದುವೆಯಾಗಿ ವರ್ಷಗಳು ಕಳೆದರೂ ಮಕ್ಕಳಾಗದೇ ಇದ್ದುದರಿಂದ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊರಮಾವುನಲ್ಲಿ ನಡೆದಿದೆ.

ಆತ್ಯಹತ್ಯೆಗೆ ಶರಣಾದವರನ್ನು ಹೊರಮಾವಿನ ಚೈತನ್ಯ ಗ್ರಾಮ ಲೇಔಟ್‌ನ ಚಂದ್ರಪ್ರಭ(52) ಎಂದು ಗುರುತಿಸಿದ್ದು, ವಿವಾಹವಾಗಿ 15 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾರೆ. ಹೆಣ್ಣೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News