ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಲು ಆರ್ ಬಿಐ ಹಣ ನೀಡುತ್ತಿಲ್ಲ ಎಂದ ಕೇಂದ್ರ ಸಚಿವ

Update: 2018-12-18 13:56 GMT

ಮುಂಬೈ, ಡಿ.15: ಚುನಾವಣೆಗೂ ಮೊದಲು ಪ್ರಧಾನಿ ಭರವಸೆ ನೀಡಿದ್ದ 15 ಲಕ್ಷ ರೂ. ಪ್ರತಿಯೊಬ್ಬರ ಖಾತೆಗೆ ನಿಧಾನವಾಗಿ ಬರಲಿದೆ. ಇದಕ್ಕಾಗಿ ಆರ್ ಬಿಐನಿಂದ ಹಣ ಕೇಳಲಾಗಿದೆ. ಆದರೆ ಆರ್ ಬಿಐ ಹಣ ನೀಡುತ್ತಿಲ್ಲ” ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.

“15 ಲಕ್ಷ ರೂ.ಗಳು (ಕೇಂದ್ರ ಸರಕಾರ ನೀಡಿದ್ದ ಭರವಸೆ) ನಿಧಾನವಾಗಿ ಬರಲಿದೆಯೇ ಹೊರತು ಒಮ್ಮಿಂದೊಮ್ಮೆಲೆ ಅಲ್ಲ. ಆರ್ ಬಿಐನಿಂದ ಹಣ ಕೇಳಲಾಗಿದೆ. ಆದರೆ ಅವರು ನೀಡುತ್ತಿಲ್ಲ. ಆದ್ದರಿಂದ ಆ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ” ಎಂದು ಅಠಾವಳೆ ಹೇಳಿರುವುದಾಗಿ ಎಎನ್ ಐ ವರದಿ ತಿಳಿಸಿದೆ.

ಚುನಾವಣೆಗೂ ಮುನ್ನ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡಲಾಗುವುದು ಎನ್ನುವ ಭರವಸೆಯನ್ನು ಮೋದಿ ಸರಕಾರ ಈಡೇರಿಸದೆ ಜನರಿಗೆ ಮೋಸ ಮಾಡಿದೆ ಎಂದು ವಿಪಕ್ಷಗಳು ನಿರಂತರ ವಾಗ್ದಾಳಿ ನಡೆಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News