ಐಎಫ್ಎಫ್ ರಿಯಾದ್ ಘಟಕ ವತಿಯಿಂದ ಹುಬ್ಬುರ್ರಸೂಲ್ ಅಭಿಯಾನ

Update: 2018-12-29 05:47 GMT

ರಿಯಾದ್, ಡಿ. 29: ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ಘಟಕದ ವತಿಯಿಂದ ಹುಬ್ಬುರ್ರಸೂಲ್ ಅಭಿಯಾನದ ಅಂಗವಾಗಿ ಆಯೋಜಿಸಿದ್ದ 'ಸಬಲೀಕರಣದ ಪ್ರವಾದಿ' ಕಾರ್ಯಕ್ರಮವು ಇಲ್ಲಿನ ಬದಿಯಾ ಸಭಾಂಗಣದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಂ ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಶರೀಫ್ ಪ್ರವಾದಿ (ಸ.ಅ.)ರ ಜೀವನ ಶೈಲಿಯು ಪರಿಪೂರ್ಣತೆಯಿಂದ ಕೂಡಿತ್ತಲ್ಲದೆ, ಹಲವಾರು ಕ್ರಾಂತಿಗಳನ್ನು ಮಾಡುವುದರ ಮೂಲಕ ಇಡೀ ಮಾನವಕುಲಕ್ಕೆ ಮಾದರಿ ಪುರುಷರಾದರು ಎಂದು  ವಿವರಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಘಟಕ ಅಧ್ಯಕ್ಷ ಇಸ್ಮಾಯಿಲ್ ಇನೋಳಿ, ಪ್ರವಾದಿವರ್ಯರ ನ್ಯಾಯಪರ ಹೋರಾಟವನ್ನು ನೆನಪಿಸುತ್ತಾ ನಮ್ಮ ಹಕ್ಕುಗಳನ್ನು ಸಂರಕ್ಷಿಸಲು ನ್ಯಾಯಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹೇಳಿದರು.

ವೇದಿಕೆಯಲ್ಲಿ ಇಂಡಿಯನ್ ಸೋಷಿಯಲ್ ಫಾರಂ ರಿಯಾದ್ (ಕರ್ನಾಟಕ) ರಾಜ್ಯ ಸಮಿತಿ ಉಪಾಧ್ಯಕ್ಷ ಅಬೂಬಕರ್ ಸಿದ್ದೀಕ್, ಇಂಡಿಯಾ ಫ್ರೆಟರ್ನಿಟಿ ಫೋರಂ ರಿಯಾದ್ ಚಾಪ್ಟರ್ ಸದಸ್ಯ ಮುಹಮ್ಮದ್ ಹಾರಿಸ್, ಸಮಾಜ ಸೇವಕರಾದ ಮುಸ್ತಾಕ್ ಖಾಸಿಂ, ಉದ್ಯಮಿಗಳಾದ ಸರ್ಫ್ರಾಝ್ ದೀರ ಮತ್ತು ಅಬ್ದುಲ್ ಕಾದರ್ ಸವನೂರ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಮುಹಮ್ಮದ್ ನಾಸಿರ್ ನಿರೂಪಿಸಿ, ಅಬ್ದುಲ್ ರಝಾಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News