ರಣಜಿ ಕ್ರಿಕೆಟ್: ಶತಕ ವಂಚಿತ ವಿನಯ್

Update: 2018-12-31 18:58 GMT

ಆಲೂರು, ಡಿ.31: ಛತ್ತೀಸ್‌ಗಡ ತಂಡದ ವಿರುದ್ಧ ನಡೆಯುತ್ತಿರುವ ರಣಜಿ ಎ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 418 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿದೆ. ಛತ್ತೀಸ್‌ಗಡ ತಂಡ ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 121ಕ್ಕೆ 3 ವಿಕೆಟ್ ಕಳೆದುಕೊಂಡಿದೆ.

 ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಪ್ರಥಮ ದಿನದಾಟವಾದ ರವಿವಾರ ನಿಶ್ಚಲ್ ಹಾಗೂ ಕೆ.ಸಿದ್ದಾರ್ಥ ಅವರ ಅಮೋಘ ಶತಕಗಳ ಸಹಾಯದಿಂದ ಮಿಂಚಿದ್ದ ಕರ್ನಾಟಕಕ್ಕೆ ಎರಡನೇ ದಿನದಾಟವಾದ ಸೋಮವಾರ ವೇಗದ ಬೌಲರ್ ವಿನಯ್‌ಕುಮಾರ್(ಅಜೇಯ 90)ಮತ್ತಷ್ಟು ಮೆರುಗು ತಂದರು. ಅವರಿಗೆ ಕೆ.ಗೌತಮ್(15) ಹಾಗೂ ಮಿಥುನ್(17)ಅಲ್ಪ ಸಾಥ್ ನೀಡಿ ದರು. ವಿನಯ್‌ಕುಮಾರ್‌ಗೆ ಶತಕ ಗಳಿಸುವ ಅವಕಾಶವಿದ್ದರೂ ಇನ್ನೊಂದು ಕಡೆ ವಿಕೆಟ್‌ಗಳು ಉರುಳುತ್ತಲೇ ಸಾಗಿದವು. ಅಂತಿಮವಾಗಿ ಕರ್ನಾಟಕ 418 ರನ್‌ಗಳ ಉತ್ತಮ ಮೊತ್ತ ದಾಖಲಿಸಿ ಆಲೌಟ್ ಆಯಿತು. ಛತ್ತೀಸ್‌ಗಡ ಪರ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಪಂಕಜ್‌ರಾವ್ 82 ರನ್ ನೀಡಿ 7 ವಿಕೆಟ್ ಉರುಳಿಸಿದರು.

ಕರ್ನಾಟಕದ ಸವಾಲಿಗೆ ಉತ್ತರಿಸಹೊರಟಿರುವ ಛತ್ತೀಸ್‌ಗಡ ಆರಂಭದಲ್ಲೇ ಮಿಥುನ್(26ಕ್ಕೆ3) ಅವರ ವೇಗದ ದಾಳಿಗೆ ತಡಬಡಿಸಿತು. 25 ರನ್ ಗಳಿಸುವಷ್ಟರಲ್ಲಿ ಅದು ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ಅಮನ್‌ದೀಪ್(ಅಜೇಯ 43) ಹಾಗೂ ಹರ್‌ಪ್ರೀತ್‌ಸಿಂಗ್(ಅಜೇಯ 53) ಅವರ ನೆರವಿನಿಂದ ಸಾವರಿಸಿಕೊಂಡಿದೆ. 121 ರನ್ ಗಳಿಸಿ ಉತ್ತಮ ಮೊತ್ತದತ್ತ ದಾಪುಗಾಲಿಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News