ಕರ್ನಾಟಕ ಹೈಕೋರ್ಟ್ನ ಹಂಗಾಮಿ ಸಿಜೆಯಾಗಿ ಎಲ್.ನಾರಾಯಣಸ್ವಾಮಿ ನೇಮಕ
Update: 2019-01-17 16:26 GMT
ಬೆಂಗಳೂರು, ಜ.17: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ನ ಹಂಗಾಮಿ ಸಿಜೆಯಾಗಿ ಎಲ್.ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
1959ರ ಜುಲೈ 1ರಂದು ವಕೀಲಿ ವೃತ್ತಿಗೆ ನೋಂದಾಯಿಸಿಕೊಂಡಿದ್ದ ನ್ಯಾ.ನಾರಾಯಣಸ್ವಾಮಿ ಅವರು 2007ರ ಜುಲೈ 4ರಂದು ಹೈಕೋರ್ಟ್ನ ಹೆಚ್ವುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2009ರ ಎಪ್ರಿಲ್ 18ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಖಾಯಂ ಆದ ಎಲ್.ನಾರಾಯಣಸ್ವಾಮಿ ಅವರನ್ನ ಇದೀಗ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ಅವರು ನೇಮಕ ಮಾಡಿದ್ದಾರೆ.