ಬಜೆಟ್‌ಗೂ ಮುನ್ನವೇ ಅಂಕಿ-ಅಂಶ ಸೋರಿಕೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2019-02-01 05:00 GMT

ಹೊಸದಿಲ್ಲಿ, ಜ.2: ಬಜೆಟ್ ಮಂಡನೆಗೆ ಮುನ್ನವೇ ಮಾಧ್ಯಮಗಳಲ್ಲಿ ಅಂಕಿ-ಅಂಶ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಸರಕಾರವೇ ಇದನ್ನು ಸೋರಿಕೆ ಮಾಡಿದೆಯೇ? ಎಂದು ಪ್ರಶ್ನಿಸಿದೆ.

ಈ ಮೂಲಕ ಬಜೆಟ್ ಮಂಡನೆಗೆ ಮುನ್ನವೇ ವಿವಾದ ಭುಗಿಲೆದ್ದಿದೆ.

  ಸಂಸತ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಬಜೆಟ್ ಮಂಡನೆಗೂ ಮುನ್ನವೇ ಅಂಕಿ-ಅಂಶ ಸೋರಿಕೆಯಾಗಿದ್ದು ಆಘಾತಕಾರಿ ಅಂಶ. ಕೇಂದ್ರ ಆರ್ಥಿಕ ಸರ್ವೆಯನ್ನು ಏಕೆ ಬಿಡುಗಡೆ ಮಾಡಿಲ್ಲ?,ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಖರ್ಗೆ ಆರೋಪಿಸಿದರು.

ಕೇಂದ್ರ ಸರಕಾರ ಬಜೆಟ್ ಅಂಕಿ-ಅಂಶಗಳನ್ನು ಮಾಧ್ಯಮಗಳಿಗೆ ಲೀಕ್ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News