ಮಾರ್ಚ್ 21ರಂದು ಐ.ಎಫ್.ಎಫ್.ನಿಂದ 'ಸ್ನೇಹ ಕೂಟ-19': ಭಿತ್ತಿಪತ್ರ ಬಿಡುಗಡೆ

Update: 2019-02-01 06:19 GMT

ರಿಯಾದ್, ಫೆ.1: ಅನಿವಾಸಿ ಭಾರತೀಯರನ್ನು ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಒಂದುಗೂಡಿಸುವ ನಿಟ್ಟಿನಲ್ಲಿ ಇಂಡಿಯಾ ಫ್ರಟರ್ನಿಟಿ ಫೋರಂ(ಐ.ಎಫ್.ಎಫ್.) ರಿಯಾದ್ ವತಿಯಿಂದ ಮಾರ್ಚ್ 21ರಂದು ನಡೆಯುವ "ಸ್ನೇಹ ಕೂಟ-19" ಇದರ ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮ ಜ.29ರಂದು ರಿಯಾದ್ ನ ಫ್ರಟರ್ನಿಟಿ ಹೌಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಫ್ರಟರ್ನಿಟಿ ಫೆಸ್ಟ್ ಹೆಸರಿನಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಸೌದಿ ಅರೇಬಿಯಾದ್ಯಂತ ನಡೆಸಲಾಗುತ್ತಿದೆ.

ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಇಂಡಿಯಾ ಫ್ರಟರ್ನಿಟಿ ಫೋರಮ್, ರಿಯಾದ್ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಇಸ್ಮಾಯಿಲ್ ಯೂಸುಫ್, ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ಅನಿವಾಸಿ ಭಾರತೀಯರಿಗೆ ಆಹ್ವಾನ ನೀಡಿದರು. ರಿಯಾದ್ ಎಕ್ಸಿಟ್ -16 ಸುಲಯ್ ನ ತಾಕತ್ ವ್ಯು ಇಸ್ತಿರಾಹ್ ದಲ್ಲಿ ಮಾರ್ಚ್ 21ರಂದು ನಡೆಯಲಿರುವ ಕುಟುಂಬ ಸಮ್ಮಿಳನದಲ್ಲಿ ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳು ಸಾರ್ವಜನಿಕ ಭಾಷಣ, ಕ್ರೀಡೆ, ರಸಪ್ರಶ್ನೆ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಈ ಸಂದರ್ಭ ಇಂಡಿಯಾ ಫ್ರಟರ್ನಿಟಿ ಫೋರಮ್, ರಿಯಾದ್ ಕರ್ನಾಟಕ ಚಾಪ್ಟರ್ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಸಾಲ್ಮರ, ಕರ್ನಾಟಕ ಚಾಪ್ಟರ್ ಸದಸ್ಯರಾದ ಅಬ್ದುಲ್ ರೌಫ್, ಉಸ್ಮಾನ್, ಅಬ್ದುಲ್ ರಝಾಕ್ ಮತ್ತು ಸ್ನೇಹ ಕೂಟ ಕಾರ್ಯಕ್ರಮ ಸಂಯೋಜಕ ಅಬೂಬಕರ್ ಸಿದ್ದೀಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News