ಸರಳವಾಗಿ ನಡೆದ ಕೋ.ಚೆನ್ನಬಸಪ್ಪ ಅಂತ್ಯಕ್ರಿಯೆ
Update: 2019-02-24 14:15 GMT
ಬೆಂಗಳೂರು, ಫೆ. 24: ಹೃದಯಾಘಾತದಿಂದ ಶನಿವಾರ ನಿಧನರಾದ ಸ್ವಾತಂತ್ರ ಹೋರಾಟಗಾರ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ಹಿರಿಯ ಸಾಹಿತಿ ಕೋ. ಚೆನ್ನಬಸಪ್ಪನವರ ಅಂತ್ಯಕ್ರಿಯೆಯನ್ನು ವೀರಶೈವ ಪದ್ಧತಿಯಂತೆ ಸರಳವಾಗಿ ನೆರವೇರಿಸಲಾಯಿತು.
ರವಿವಾರ ಮಧ್ಯಾಹ್ನ ಚಾಮರಾಜಪೇಟೆಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಡಾ.ಮರುಳಸಿದ್ಧಪ್ಪ, ಶಾಸಕ ವಿ.ಸೋಮಣ್ಣ, ನಿವೃತ್ತ ನ್ಯಾ.ಗೋಪಾಲಗೌಡ ಸೇರಿದಂತೆ ಕುಟುಂಬ ವರ್ಗ ಹಾಗೂ ಸಾಹಿತ್ಯಾಭಿಮಾನಿಗಳು ಭಾಗವಹಿಸಿದ್ದರು.