ಕತರ್ ನಲ್ಲಿ ನೆಲ್ಯಾಡಿ ನಿವಾಸಿ ಹೃದಯಾಘಾತದಿಂದ ನಿಧನ

Update: 2019-03-19 06:11 GMT

ಉಪ್ಪಿನಂಗಡಿ, ಮಾ.19: ಕತರ್ ನಲ್ಲಿ ಉದ್ಯೋಗದಲ್ಲಿದ್ದ ನೆಲ್ಯಾಡಿ ನಿವಾಸಿ ಆದಂ ಹೊಸ್ಮಠ (55) ಎಂಬವರು ಹೃದಯಾಘಾತದಿಂದ ಮಾ.15ರಂದು ನಿಧನರಾಗಿದ್ದಾರೆ.

 ಹಲವು ವರ್ಷಗಳಿಂದ ಕತರ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಆದಂ ಅವರು, ಪತ್ನಿ ಮತ್ತು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಮೂಲತ: ಕಡಬ ಹೊಸಮಠ ನಿವಾಸಿಯಾಗಿದ್ದ ಆದಂ, ಅರಸಿನಮಕ್ಕಿ ಮಸೀದಿ ಮುದರ್ರಿಸ್ ಮುಹಮ್ಮದ್ ಮದನಿ  ಅವರ ಸಹೋದರ.

 ಆದಂ ಅವರ ಮೃತದೇಹ ವಿಮಾನದ ಮೂಲಕ ಮಂಗಳವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ಮಾರ್ಚ್ 20ರಂದು ಬೆಳಗ್ಗೆ 10:30ಕ್ಕೆ  ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಜುಮಾ ಮಸೀದಿ ವಠಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ