ಬಿಜೆಪಿಯಿಂದ ಪಕ್ಷ ಸೇರಲು ಆಹ್ವಾನ ಬಂದಿತ್ತು: ಸುಶೀಲ್ ಕುಮಾರ್ ಶಿಂಧೆ

Update: 2019-03-26 17:46 GMT

ಹೊಸದಿಲ್ಲಿ,ಮಾ.26: ಲೋಕಸಭಾ ಚುನಾವಣೆಗೂ ಮುನ್ನ ಪಕ್ಷ ಸೇರುವಂತೆ ಬಿಜೆಪಿಯಿಂದ ಆಹ್ವಾನ ಬಂದಿತ್ತು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ ಮಂಗಳವಾರ ತಿಳಿಸಿದ್ದಾರೆ.

“ಮೊದಲಿಗೆ ನನ್ನ ಪುತ್ರಿ ಹಾಲಿ ಶಾಸಕಿ ಪ್ರಣಿತಿ ಶಿಂಧೆಗೆ ಆಹ್ವಾನ ನೀಡಿದ್ದ ಬಿಜೆಪಿ ನಂತರ ನನಗೂ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದಾರೆ” ಎಂದು ಶಿಂಧೆ ತಿಳಿಸಿದ್ದಾರೆ.

“ಆದರೆ ನಾವು ಕಾಂಗ್ರೆಸ್ ತೊರೆಯುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಆಮಿಷಗಳಿಗೆ ನಾವು ಬಲಿಯಾಗುವುದಿಲ್ಲ. ನಾವಿಬ್ಬರೂ ಕಾಂಗ್ರೆಸ್‌ನ ಪ್ರಾಮಾಣಿಕ ಕಾರ್ಯಕರ್ತರು ಮತ್ತು ನಮ್ಮ ಕೊನೆ ಉಸಿರಿರುವವರೆಗೂ ಹಾಗೇ ಇರುತ್ತೇವೆ” ಎಂದು ಶಿಂಧೆ ತಿಳಿಸಿದ್ದಾರೆ.

ನಿಮಗೆ ಆಮಿಷ ನೀಡಿದ ಬಿಜೆಪಿಯ ನಾಯಕ ಯಾರು ಎಂದು ಮಾಧ್ಯಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ 77ರ ಹರೆಯದ ಶಿಂಧೆ, “ನನ್ನಷ್ಟೇ ವಯಸ್ಸಿನ ವ್ಯಕ್ತಿಯೊಬ್ಬರು ಈ ಆಹ್ವಾನ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News