ಅರಿವು ಅಗತ್ಯ

Update: 2019-03-26 18:52 GMT

ಮಾನ್ಯರೇ,

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತೀ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಏಕೆಂದರೆ ಸದೃಢ ದೇಶ ನಿರ್ಮಾಣವಾಗಬೇಕಾದರೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾಗಿದ್ದು, ಮತ ಹಾಕುವ ಮೂಲಕ ಹಕ್ಕನ್ನು ಚಲಾಯಿಸುವುದು ಸಹ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಹಾಕಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಅಹಿತಕರ ಘಟನೆ ನಡೆಯದಂತೆ ಚುನಾವಣೆ ನಡೆಸಬೇಕು. ಮತದಾರರು ಕೂಡಾ ಜಿಲ್ಲಾಡಳಿತ ಜವಾಬ್ದಾರಿಯನ್ನು ನಿಭಾಯಿಸಲು ಸಹಕರಿಸಬೇಕು.

-ತ್ಯಾಗರಾಜ ಸಿ., ದಾವಣಗೆರೆ

Writer - -ತ್ಯಾಗರಾಜ ಸಿ., ದಾವಣಗೆರೆ

contributor

Editor - -ತ್ಯಾಗರಾಜ ಸಿ., ದಾವಣಗೆರೆ

contributor

Similar News