ಸೌದಿ ಅಧಿಕಾರಿಗಳಿಂದ ಪರಿಹಾರ ಸ್ವೀಕರಿಸಿಲ್ಲ: ಖಶೋಗಿ ಕುಟುಂಬ ಸ್ಪಷ್ಟನೆ

Update: 2019-04-10 18:45 GMT

 ದುಬೈ, ಎ. 10: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಕೊಲೆ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸುವುದಕ್ಕಾಗಿ ಸೌದಿ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ತೊಡಗಿರುವ ವರದಿಗಳನ್ನುಅವರ ಕುಟುಂಬ ಬುಧವಾರ ನಿರಾಕರಿಸಿದೆ.

ಖಶೋಗಿಯ ಪುತ್ರರು ಸೌದಿ ಅರೇಬಿಯ ಸರಕಾರದಿಂದ ಪರಿಹಾರ ಮೊತ್ತವನ್ನು ಸ್ವೀಕರಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ನಿರಾಕರಣೆ ಬಂದಿದೆ.
‘‘ಪ್ರಸಕ್ತ ವಿಚಾರಣೆ ನಡೆಯುತ್ತಿದೆ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಯಾವುದೇ ಮಾತುಕತೆ ನಡೆದಿಲ್ಲ ಹಾಗೂ ಈಗ ನಡೆಯುತ್ತಿಲ್ಲ’’ ಎಂದು ಖಶೋಗಿ ಪುತ್ರ ಸಲಾಹ್ ಖಶೋಗಿಯ ಟ್ವಿಟರ್ ಖಾತೆಯಲ್ಲಿ ಹಾಕಲಾದ ಇಂಗ್ಲಿಷ್ ಭಾಷೆಯಹೇಳಿಕೆಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News