ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕ ಹಾಗು ಜ್ಯೋತಿರಾದಿತ್ಯ ಅವರಿಗೆ ರಾಹುಲ್ ಗಾಂಧಿ ನೀಡಿರುವ ನಿರ್ದೇಶನವೇನು?

Update: 2019-05-02 14:01 GMT

ಹೊಸದಿಲ್ಲಿ, ಮೇ 2 : ಉತ್ತರ ಪ್ರದೇಶದಲ್ಲಿ ಜಾತ್ಯತೀತ ಮೈತ್ರಿಕೂಟವೇ ಗೆಲುವು ಸಾಧಿಸಲಿದೆ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷ ದುರ್ಬಲವಾಗಿರುವಲ್ಲಿ ಎಸ್ಪಿ ಹಾಗು ಬಿಎಸ್ಪಿಗೆ  ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. 

ಎನ್ ಡಿಟಿವಿ ಯ ಶ್ರೀನಿವಾಸನ್ ಜೈನ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ ಅವರು ದೇಶದಲ್ಲಿ ಇನ್ನೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗುವುದಿಲ್ಲ. ನಾವು ಈ ಚುನಾವಣೆ ಗೆಲ್ಲುತ್ತಿದ್ದೇವೆ. ಅದರ ಬಗ್ಗೆ ಸಂಶಯ ಬೇಡ ಎಂದು ಹೇಳಿದ್ದಾರೆ. 

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಂದಾಗಿ ಬಿಜೆಪಿಗೆ ಲಾಭವಾಗುವುದಿಲ್ಲವೇ ಎಂದು ಕೇಳಿದ್ದಕ್ಕೆ ಅಂತಹ ಸಾಧ್ಯತೆಯೇ ಇಲ್ಲ, ನಾವು ಎಲ್ಲಿ ದುರ್ಬಲವಾಗಿದ್ದೇವೆ ಅಲ್ಲಿ ನಾವು ಎಸ್ಪಿ, ಬಿಎಸ್ಪಿಗೆ ಬೆಂಬಲ ನೀಡುತ್ತೇವೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸುವುದು ನಮ್ಮ ಗುರಿ ಎಂದು ಅಲ್ಲಿ ಪಕ್ಷದ ಉಸ್ತುವಾರಿಗಳಾದ ಪ್ರಿಯಾಂಕ ಗಾಂಧಿ ಹಾಗು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ ಎಂದು ರಾಹುಲ್ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News