ಫನಿ ಚಂಡಮಾರುತ: ಓಡಿಶಾಕ್ಕೆ ರಾಜ್ಯದಿಂದ 10 ಕೋಟಿ ರೂ.ನೆರವು

Update: 2019-05-09 12:48 GMT

ಬೆಂಗಳೂರು, ಮೇ 9: ಇತ್ತೀಚೆಗೆ ಸಂಭವಿಸಿದ ಫನಿ ಚಂಡಮಾರುತದಿಂದ ತತ್ತರಿಸಿರುವ ಓಡಿಶಾ ರಾಜ್ಯದಲ್ಲಿ ಪುನರ್ವಸತಿ ಮತ್ತು ಪರಿಹಾರ ಕ್ರಮಗಳಿಗಾಗಿ ರಾಜ್ಯ ಸರಕಾರವು 10ಕೋಟಿ ರೂಪಾಯಿಗಳ ನೆರವು ನೀಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಜನ, ಜಾನುವಾರುಗಳು ಮತ್ತು ಅಪಾರ ಮೊತ್ತದ ಆಸ್ತಿ-ಪಾಸ್ತಿ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ಕರ್ನಾಟಕ ಸರಕಾರ 10 ಕೋಟಿ ರೂ.ಅನುದಾನ ಪ್ರಕಟಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News